Friday, April 11, 2025
Google search engine

Homeಅಪರಾಧಗಣಪತಿ ಮೂರ್ತಿ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ

ಗಣಪತಿ ಮೂರ್ತಿ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ

ಧಾರವಾಡ : ಮಹಾನಗರ ಹಾಗೂ ಜಿಲ್ಲೆಯಲ್ಲಿ ನಿಷೇಧಿತ ಪಿಒಪಿ ಗಣಪತಿ ಮೂರ್ತಿಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದ ಜಿಲ್ಲಾಡಳಿತ ಏಕಾಏಕಿ ದಾಳಿ ನಡೆಸಿದ್ದು, ಉಪವಿಭಾಗಾಧಿಕಾರಿ ಅಶೋಕ್ ತೇಲಿ ನೇತೃತ್ವದ ಅಧಿಕಾರಿಗಳ ತಂಡ ಧಾರವಾಡ ನಗರದ ಮೂರ್ತಿ ದಾಸ್ತಾನು ಕೇಂದ್ರಗಳು, ಪಿಒಪಿ ಮೂರ್ತಿಯನ್ನು ಪರಿಶೀಲಿಸಿದರು. ನಗರದ ಲಿಂಗಾಯತ ಭವನದ ಪಕ್ಕದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಮಂಜುನಾಥ ಬೆಳಗಾಂವಕರ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಗಣಪತಿ ಮೂರ್ತಿಗಳಿಗೆ ಧಾರವಾಡ ಸಿ.ಬಿ. ಭೇಟಿ ನೀಡಿ ಪರಿಶೀಲಿಸಿದರು.

ಬಹುತೇಕ ಮೂರ್ತಿಗಳು ಪಿಒಪಿ, ಮಣ್ಣು ಮಿಶ್ರಿತ ಪಿಒಪಿ, ಕೃತಕ ಬಣ್ಣ ಲೇಪಿತ, ಚೆಲ್ಲಿದ ಮಿಶ್ರಿತ ಪಿಒಪಿ ಗಣಪತಿ ಮೂರ್ತಿಗಳು ಪತ್ತೆಯಾಗಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪ್ರಯೋಗಾಲಯ ಪರೀಕ್ಷೆಗೆ ಮೂರ್ತಿಗಳ ಮಾದರಿ ಸಂಗ್ರಹಿಸಿದರು. ನಂತರ ಪರಿಸರ ಭವನದ ಮುಂಭಾಗದ ಕಟ್ಟಡದ ನೆಲ ಮಹಡಿಯಲ್ಲಿ ಸಂಗ್ರಹಿಸಲಾಗಿದ್ದ ಪಿಒಪಿ ಗಣಪತಿ ಮೂರ್ತಿಗಳ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ. ಇನ್ನೂ ಕೆಲವೆಡೆ ವಿಗ್ರಹಗಳ ಮಾಹಿತಿ ಬರುತ್ತಿದೆ. ಅಧಿಕಾರಿಗಳ ತಂಡ ತಮ್ಮದೇ ಆದ ತಪಾಸಣೆ ನಡೆಸುತ್ತಿದೆ. ಪೊಲೀಸರು, ಪಾಲಿಕೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಹಕಾರದಲ್ಲಿ ತಪಾಸಣೆ ಕಾರ್ಯ ನಡೆಯುತ್ತಿದೆ. ಜನರೂ ಜಾಗೃತರಾಗಿ ಪಿಒಪಿ ಗಣಪತಿ ಮೂರ್ತಿ ತೆಗೆದುಕೊಳ್ಳಬಾರದು ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಜಗದೀಶ್ ಐ.ಎಚ್ ಮಾತನಾಡಿ, ಮಣ್ಣಿನ ಮೂರ್ತಿಗಳು ಭಾರವಾಗಿವೆ. ಪಿಒಪಿ ಗಣಪತಿ ಹೊರೆಯಾಗುವುದಿಲ್ಲ. ತೂಕದಲ್ಲಿನ ವ್ಯತ್ಯಾಸವು ತೋರಿಸುತ್ತದೆ. ಪಿಒಪಿ ಅಥವಾ ಮಣ್ಣಿನ ವಿಗ್ರಹದ ಬಗ್ಗೆ ಅನುಮಾನವಿದ್ದಲ್ಲಿ ಮೂರ್ತಿಯನ್ನು ಪರೀಕ್ಷಿಸಲು ಮಾಹಿತಿ ಪಡೆಯುತ್ತೇವೆ. ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಸಂತೋಷ್ ಮಾತನಾಡಿ, ಪಿಒಪಿ ಮೂರ್ತಿಗಳ ಸಾಗಣೆ ತಡೆಯಲು ಆಯುಕ್ತರ ನಿರ್ದೇಶನದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡಗಳನ್ನು ರಚಿಸಲಾಗಿದೆ. ಪಿಒಪಿ ಮೂರ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಇಂದಿನ ದಿಢೀರ್ ದಾಳಿಯಲ್ಲಿ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular