Thursday, April 17, 2025
Google search engine

Homeಸ್ಥಳೀಯಧೈರ್ಯ ವೀರ ಶೌರ್ಯ ಮಹಿಳೆ ಒನಕೆ ಓಬವ್ವ : ಇಕ್ಬಾಲ್ ಹುಸೇನ್

ಧೈರ್ಯ ವೀರ ಶೌರ್ಯ ಮಹಿಳೆ ಒನಕೆ ಓಬವ್ವ : ಇಕ್ಬಾಲ್ ಹುಸೇನ್

ರಾಮನಗರ: ಪ್ರಪಂಚದಲ್ಲಿ ಕೋಟಿ ಕೋಟಿ ಜನ ಹುಟ್ಟುತ್ತಾರೆ ಹಾಗೂ ಸಾಯುತ್ತಾರೆ ಆದರೆ ಕೆಲವರು ಮಾತ್ರ ಇತಿಹಾಸದ ಪುಟಗಳಲ್ಲಿ ಸೇರುತ್ತಾರೆ ಅಂತವರ ಸಾಲಿನಲ್ಲಿ ಧೈರ್ಯ ವೀರ ಶೌರ್ಯ ವೀರವನಿತೆ ಒನಕೆ ಓಬವ್ವ ಸೇರುತ್ತಾರೆ ಎಂದು ರಾಮನಗರ ವಿಧಾನಸಭಾ ಶಾಸಕರಾದ ಹೆಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ನಮ್ಮ ನಾಡಿನ, ರಾಷ್ಟ್ರದ, ಪ್ರಪಂಚದ ಇತಿಹಾಸದಲ್ಲಿ ಇತಿಹಾಸ ಸೃಷ್ಟಿ ಮಾಡಿರುವ ಮಹನೀಯರ ಜಯಂತಿಯನ್ನು ಆಚರಿಸುತ್ತೇವೆ ಆದರೆ ದೀರ ನಾರಿ, ವೀರ ವನಿತೆ ಒನಕೆ ಓಬವ್ವ ಅವರಲ್ಲರಿಗೂ ವಿಭಿನ್ನವಾದವರು ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್ ಅವರು ತಿಳಿಸಿದರು.

ಚಲವಾದಿ ಸಮಾಜದಲ್ಲಿ ತಳ ಮಟ್ಟದ ಸಮುದಾಯದಲ್ಲಿ ಹುಟ್ಟಿ ಒಬ್ಬ ಕೋಟೆ ಕಾವಲುಗಾರನ ಹೆಂಡತಿಯಾಗಿ ಇತಿಹಾಸ ಸೃಷ್ಠಿಸಿದವರು ವೀರರಾಣಿ ಒನಕೆ ಓಬವ್ವನವರು. ಅವರ ಧೈರ್ಯತನ, ವೀರತನ, ಶೂರತನವುಳ್ಳ ವೀರರಾಣಿ ಒನಕೆ ಓಬವ್ವರನ್ನು ನೆನಪಿಸಿಕೊಳ್ಳುವಂತಹ ದಿನ ಎಂದರು. ನಮ್ಮ ನಾಡಿಗೆ ಆಪತ್ತು ಬಂದಿದೆ ಎಂದು ತಿಳಿದು ಶಸ್ತ್ರಭ್ಯಾಸ, ವಿದ್ಯೆ, ಸೈನ್ಯ ತರಬೇತಿ ಎನು ತಿಳಿಯದೆ ತಮ್ಮ ಧೈರ್ಯದಿಂದ ಎದುರಾಳಿಯ ನೂರಾರು ಸೈನಿಕರೊಂದಿಗೆ ಹೋರಾಡಿ ತಮ್ಮ ಕೋಟೆಯ ರಕ್ಷಣೆ ಮಾಡಿದರು ಎಂದು ತಿಳಿಸಿದರು.

ನಾಡಿನ ಇತಿಹಾಸದಲ್ಲಿ ಅಮರರಾಗಿರುವಂತಹ ಒನಕೆ ಓಬವ್ವನವರ ದಿನಾಚರಣೆಯನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದಂತಹ ಹೈದರಾಲಿಯ ಸೈನ್ಯವನ್ನು ಮಣಿಸಿ ತನ್ನ ಕೋಟೆಯ ರಕ್ಷಣೆ ಮಾಡಿ, ಕೊನೆಗೆ ತನ್ನ ಪ್ರಾಣವನ್ನು ತ್ಯಾಗ ಮಾಡಿದ ವೀರ ಮಣಿ, ವೀರ ನಾಯಕಿ ಒನಕೆ ಓಬವ್ವ ಎಂದು ತಿಳಿಸಿದರು. ಹೆಣ್ಣು ಮಕ್ಕಳು ಇತಿಹಾಸದಲ್ಲಿ ಅಪರೂಪ ಕಾಣಿಸಿಕೊಳ್ಳುತ್ತಾರೆ. ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ ಸೇರಿದಂತೆ ಅನೇಕ ಮಹಿಳೆಯರನ್ನು ಇಂದು ನಾವು ನೆನಪಿಸಿಕೊಳ್ಳುವಂತಹ ದಿನ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಿಂದ ಡಾ. ಬಿ.ಆರ್.ಅಂಬೇಡ್ಕರ್ ಭವನದವರಿಗೆ ವೀರವನಿತೆ ಒನಕೆ ಓಬವ್ವರವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಮೆರವಣಿಗೆಯನ್ನು ವಿವಿಧ ಕಲಾ ತಂಡದೊಂದಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರುಗಳಾದ ಪತ್ರಿಕಾ ಸಂಪಾದಕ ಚಲುವರಾಜು, ಶಿವಕುಮಾರಸ್ವಾಮಿ, ಶಿವಕುಮಾರ್, ಶಿವಪ್ರಕಾಶ್, ಕಿರಣ್, ಅಂಜನಾಪುರ ವಾಸು, ಮಾಗಡಿ ದೊಡ್ಡಯ್ಯ, ಹರೀಶ್ ಬಾಲು ಜಿಲ್ಲಾ ಜಾಗೃತಿ ಸಮಿತಿ ಹಾಗೂ ಉಪ ಸಮಿತಿಯ ಸದಸ್ಯರುಗಳು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ರಮ್ಯ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜದೇವಿ, ಯುವ ಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular