ಮಂಗಳೂರು (ದಕ್ಷಿಣ ಕನ್ನಡ): ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಕೊಲೆಯಾದ ಅಬ್ದುಲ್ ರೆಹಮಾನ್ ಕೊಳತ್ತಮಜಲು ಇವರ ಸ್ಮರಣಾರ್ಥ GHM ಫೌಂಡೇಶನ್ ಹಾಗೂ ಮುಹಿಯುದ್ದೀನ್ ಜುಮಾ ಮಸ್ಜಿದ್ ಕೊಳ್ತಮಜಲು, ಎಸ್ ಕೆ ಎಸ್ ಎಸ್ ಎಫ್ ಇವರ ಸಹಯೋಗದಿಂದ ಬ್ಲಡ್ ಡೊನೇಷನ್ ಕ್ಯಾಂಪ್ ಇಂದು ಕೊಳತ್ತಮಜಲು ಮದ್ರಸಾ ಸಭಾಂಗಣದಲ್ಲಿ ನಡೆಯಿತು. ಇದೇ ವೇಳೆ ಜಾತಿ, ಧರ್ಮ ನೋಡದೆ ಸರ್ವಧರ್ಮೀಯರು ಬಂದು ರಕ್ತದಾನ ಮಾಡಿರುವುದು ವಿಶೇಷ ಆಗಿತ್ತು.