Friday, April 18, 2025
Google search engine

Homeರಾಜ್ಯಏರ್ ಇಂಡಿಯಾದಿಂದ ವಿಜಯವಾಡ, ಇಂದೋರ್​ ಗೆ ಬೆಂಗಳೂರಿನಿಂದ ನೇರ ವಿಮಾನಯಾನ

ಏರ್ ಇಂಡಿಯಾದಿಂದ ವಿಜಯವಾಡ, ಇಂದೋರ್​ ಗೆ ಬೆಂಗಳೂರಿನಿಂದ ನೇರ ವಿಮಾನಯಾನ

ಬೆಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 1 ರಿಂದ ಬೆಂಗಳೂರಿನಿಂದ ವಿಜಯವಾಡ ಮತ್ತು ಇಂದೋರ್‌ಗೆ ದೈನಂದಿನ ನೇರ ವಿಮಾನಯಾನ ಸೇವೆ ಆರಂಭಿಸಿದೆ. ಬೆಂಗಳೂರು-ಇಂದೋರ್ ವಿಮಾನವು ಬೆಂಗಳೂರಿನಿಂದ ಬೆಳಿಗ್ಗೆ 11.10 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಇಂದೋರ್ ತಲುಪುತ್ತದೆ. ಇಂದೋರ್‌ನಿಂದ ವಿಮಾನವು ಮಧ್ಯಾಹ್ನ 1.30 ಕ್ಕೆ ಹೊರಟು 3.30 ಕ್ಕೆ ಬೆಂಗಳೂರು ತಲುಪುತ್ತದೆ.

ಬೆಂಗಳೂರು-ವಿಜಯವಾಡ ಮಾರ್ಗದ ಹೊಸ ದೈನಂದಿನ ವಿಮಾನವು ಬೆಂಗಳೂರಿನಿಂದ ಸಂಜೆ 4:05 ಕ್ಕೆ ಹೊರಟು ಸಂಜೆ 5:40 ಕ್ಕೆ ವಿಜಯವಾಡ ತಲುಪಲಿದೆ. ಇದು ವಿಜಯವಾಡದಿಂದ ಸಂಜೆ 6:10ಕ್ಕೆ ಹೊರಡಲಿದ್ದು, ರಾತ್ರಿ 7:50ಕ್ಕೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಭಾನುವಾರ ಅಗರ್ತಲಾವನ್ನು ತನ್ನ 32 ನೇ ದೇಶೀಯ ತಾಣವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರ್ಪಡೆಗೊಳಿಸಿದೆ. ಅಗರ್ತಲಾವನ್ನು ಗುವಾಹಟಿ ಮತ್ತು ಕೋಲ್ಕತ್ತಾಗೆ ಸಂಪರ್ಕಿಸುವ ದೈನಂದಿನ ನೇರ ವಿಮಾನಗಳನ್ನು ಆರಂಭಿಸಿದೆ. ವಿಮಾನಯಾನ ಸಂಸ್ಥೆಯು ಹೈದರಾಬಾದ್ ಮತ್ತು ಗುವಾಹಟಿ ನಡುವೆಯೂ ದೈನಂದಿನ ವಿಮಾನಯಾನ ಸೇವೆ ಆರಂಭಿಸಿದೆ.

RELATED ARTICLES
- Advertisment -
Google search engine

Most Popular