Tuesday, June 24, 2025
Google search engine

HomeUncategorizedರಾಷ್ಟ್ರೀಯಏರ್ ಇಂಡಿಯಾ ವಿಮಾನ ದುರಂತ: ಮೃತ ನರ್ಸ್ ರಂಜಿತಾ ಮೃತದೇಹ ತವರಿಗೆ, ಇಂದು ಸಂಜೆ...

ಏರ್ ಇಂಡಿಯಾ ವಿಮಾನ ದುರಂತ: ಮೃತ ನರ್ಸ್ ರಂಜಿತಾ ಮೃತದೇಹ ತವರಿಗೆ, ಇಂದು ಸಂಜೆ ಅಂತ್ಯಕ್ರಿಯೆ

ತಿರುವನಂತಪುರಂ: ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ದುರ್ಮರಣಕ್ಕೊಳಗಾದ ಕೇರಳದ ನರ್ಸ್ ರಂಜಿತಾ ನಾಯರ್ ಅವರ ಮೃತದೇಹ ಇಂದು ಬೆಳಗ್ಗೆ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಅವರ ಸ್ವಗೃಹಕ್ಕೆ ತಲುಪಿದೆ.

ಪತ್ತನಂತಿಟ್ಟ ಜಿಲ್ಲೆಯ ನಿವಾಸಿಯಾಗಿರುವ ರಂಜಿತಾ ನಾಯರ್ ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ರಂಜಿತಾ ಮೃತಪಟ್ಟಿದ್ದರು. ಡಿಎನ್ಎ ಪರೀಕ್ಷೆಯ ಮೂಲಕ ಅವರ ಮೃತದೇಹದ ಗುರುತು ಪತ್ತೆ ಮಾಡಲಾಗಿತ್ತು.

ರಂಜಿತಾ ನಾಯರ್ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 7 ಗಂಟೆ ಸುಮಾರಿಗೆ ತಿರುವನಂತಪುರದ ವಿಮಾನ ನಿಲ್ದಾಣಕ್ಕೆ ತರಲಾಯಿತು. ಸಚಿವರಾದ ವಿ. ಶಿವನ್‌ಕುಟ್ಟಿ ಮತ್ತು ಜಿ.ಆರ್. ಅನಿಲ್ ಅವರು ಮೃತದೇಹವನ್ನು ಸ್ವೀಕರಿಸಲು ಮತ್ತು ಅಂತಿಮ ನಮನ ಸಲ್ಲಿಸಲು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಜೊತೆಗಿದ್ದರು.

ರಂಜಿತಾ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪುಲ್ಲದ್‌ನಲ್ಲಿರುವ ಶಾಲೆಯಲ್ಲಿ ಅಂತಿಮ ದರ್ಶನದ ಬಳಿಕ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

RELATED ARTICLES
- Advertisment -
Google search engine

Most Popular