Monday, April 21, 2025
Google search engine

Homeರಾಜ್ಯಟೋಲ್ ನ ಗೇಟ್ ಮುರಿದು ಕಾರು ಚಲಾಯಿಸಿದ ಅಂಬೇಡ್ಕರ್ ಸೇನೆ ರಾಜ್ಯಧ್ಯಕ್ಷ: ದೂರು ದಾಖಲು

ಟೋಲ್ ನ ಗೇಟ್ ಮುರಿದು ಕಾರು ಚಲಾಯಿಸಿದ ಅಂಬೇಡ್ಕರ್ ಸೇನೆ ರಾಜ್ಯಧ್ಯಕ್ಷ: ದೂರು ದಾಖಲು

ಮಂಡ್ಯ: ಟೋಲ್ ಕಟ್ಟಲಾಗದೆ ಅಂಬೇಡ್ಕರ್ ಸೇನೆ ರಾಜ್ಯಧ್ಯಕ್ಷ  ಟೋಲ್ ಗೇಟ್ ಮುರಿದು ಕಾರು ಚಲಾಯಿಸಿದ  ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ನಲ್ಲಿ ನಡೆದಿದೆ.

ಮಾತ್ರವಲ್ಲದೇ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ನಾನು ಟೋಲ್ ಕಟ್ಟಲ್ಲ ಎಂದು ದರ್ಪ ತೋರಿದ್ದಾನೆ. ಹೆದ್ದಾರಿ ಟೋಲ್ ಕಟ್ಟಲೆಬೇಕೆಂದು ಟೋಲ್ ಸಿಬ್ಬಂದಿ ಪಟ್ಟು ಹಿಡಿದಿದ್ದು, ಟೋಲ್ ಕಟ್ಟದೆ ಕೆಲ ಕಾಲ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ.

ಬಳಿಕ ಕಾರು ರಿವರ್ಸ್ ತೆಗೆದು ವೇಗವಾಗಿ ಬಂದು ಟೋಲ್ ನ ಗೇಟ್ ಗೆ ಗುದ್ದಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ದರ್ಪ ಮೆರೆದು ಗೇಟ್ ಜಖಂಗೊಳಿಸಿದ  ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷನ ವಿರುದ್ದ ಟೋಲ್ ಸಿಬ್ಬಂದಿ ದೂರು ನೀಡಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular