Saturday, April 19, 2025
Google search engine

Homeರಾಜ್ಯಕೃಷ್ಣ ನದಿಗೆ ಹೆಚ್ಚು ನೀರು ಜನ-ಜಾನುವಾರುಗಳ ರಕ್ಷಣೆಗೆ ಅಧಿಕಾರಿಗಳ ನೇಮಕ

ಕೃಷ್ಣ ನದಿಗೆ ಹೆಚ್ಚು ನೀರು ಜನ-ಜಾನುವಾರುಗಳ ರಕ್ಷಣೆಗೆ ಅಧಿಕಾರಿಗಳ ನೇಮಕ

ರಾಯಚೂರು: ನಾರಾಯಣಪೂರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿದ್ದು, ನದಿ ಪಾತ್ರದ ಜನ ಜಾನುವಾರುಗಳ ರಕ್ಷಣೆಗೆ 14 ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶಿಸಿದ್ದಾರೆ.
ನಾರಾಯಣಪೂರ ಜಲಾಶಯದಿಂದ ಕೃಷ್ಣಾ ನದಿಗೆ 15 ಸಾವಿರ ಕ್ಯೂಸೆಕ್ಸ್ ಹಾಗೂ ಸನ್ನತಿ ಜಲಾಶಯದಿಂದ ಬೀಮಾ ನದಿಗೆ 7 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗಿದೆ, 105 ಗ್ರಾಮಗಳು ಪ್ರವಾಹ ಪೀಡಿತಕ್ಕೆ ಒಳಗಾಗುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಕಾಳಜಿ ಕೇಂದ್ರ ಗುರುತಿಸಿ ಮೂಲಭೂತ ಸೌಕರ್ಯ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಲು ತಿಳಿಸಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸೂಗುರು, ರಾಯಚೂರು ತಾಲೂಕಿನ ಗ್ರಾಮಗಳಿಗೆ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಮುಂಜಾಗ್ರತಾ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular