ಮಂಗಳೂರು: ಅರುಣ್ ಕುಮಾರ್ ಪುತ್ತಿಲರನ್ನು ಗಡಿಪಾರು ಮಾಡಲು ತಾಕತ್ತು ಇದ್ದರೆ ಮಾಡಿ ಎಂದು ಯುವಕನೋರ್ವ ಸರಕಾರ ಹಾಗೂ ಪೊಲೀಸರಿಗೆ ಗಂಭೀರ ಸವಾಲು ಹಾಕಿದ್ದಾನೆ. ಪುತ್ತಿಲರ ವಿರುದ್ಧ ಗಡಿಪಾರು ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ, ಯುವಕ ಸೆಲ್ಫಿ ವೀಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.
“ಯಾವ ಕಾರಣಕ್ಕೆ ಗಡಿಪಾರು ಮಾಡುತ್ತಿದ್ದೀರಿ? ಹಿಂದೂ ಸಮಾಜ ಯಾವ ಅನ್ಯಾಯ ಮಾಡಿದೆ? ಆಮೇಲೆ ನೋಟಿಸ್ ಕೊಡಿ. ಬಿಡುವ ಪ್ರಶ್ನೆಯೇ ಇಲ್ಲ,” ಎಂದು ಯುವಕ ಕಿಡಿಕಾರಿದ್ದಾನೆ. ತಾನು ಹಾಗೂ ಇತರರು ಮುಂದಿನ ದಿನಗಳಲ್ಲಿ ಹಿಂದುತ್ವಕ್ಕಾಗಿ 24 ಗಂಟೆಗಳ ಕಾಲ ದುಡಿಯಲಿದ್ದಾರೆ ಎಂದು ಘೋಷಿಸಿದ್ದಾನೆ.
ಪುತ್ತೂರು ವಿಭಾಗದ ಸಹಾಯಕ ಆಯುಕ್ತರಾದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಸೆಕ್ಷನ್ 58ರ ಅಡಿಯಲ್ಲಿ ಗಡಿಪಾರು ನೋಟಿಸ್ ನೀಡಲಾಗಿದೆ. ಜೂನ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದ್ದು, ಸ್ವತಃ ಅಥವಾ ನ್ಯಾಯವಾದಿಯ ಮೂಲಕ ಹಾಜರಾಗಿಲ್ಲದಿದ್ದಲ್ಲಿ, ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.