Friday, April 11, 2025
Google search engine

Homeಅಪರಾಧಎಟಿಎಂ ವಂಚನೆ ಪ್ರಕರಣ : ಹಣ ತುಂಬಿಸದ ಸಿಬ್ಬಂದಿಗಳ ವಿರುದ್ಧ FIR ದಾಖಲು

ಎಟಿಎಂ ವಂಚನೆ ಪ್ರಕರಣ : ಹಣ ತುಂಬಿಸದ ಸಿಬ್ಬಂದಿಗಳ ವಿರುದ್ಧ FIR ದಾಖಲು

ಮೈಸೂರು : ಬೀದರ್ ನಲ್ಲಿ ಎಟಿಎಂ ಹಣ ದೋಚಿದ ಪ್ರಕರನದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಎಟಿಎಂ ಮೆಷಿನ್ ಗೆ ಹಣ ತುಂಬಿಸದೇ ವಂಚನೆ ಎಸಗಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಗೆರೆಯಲ್ಲಿ ಘಟನೆ ನಡೆದಿದೆ. ಎಟಿಎಂ ಗಳಿಗೆ ಹಣ ತುಂಬಿಸುವ ಏಜೆನ್ಸಿ ಪಡೆದಿದ್ದ ಟಿಎಲ್ ಎಂಟರ್ ಪ್ರೈಸಸ್ ಕಂಪನಿಯಲ್ಲಿ ಸಿಬ್ಬಂದಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಕೆಲಸ ಮಾಡುತ್ತಿದ್ದರು. ಎಟಿಎಂಗಳಿಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ ಅಕ್ಷಯ್ ಕುಮಾರ್ ಎಟಿಎಂ ಗಳಿಗೆ ಹಣ ಹಾಕದೇ ಬ್ಯಾಗ್ ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದನು ಎನ್ನುವ ಆರೋಪ ಕೇಳಿಬಂದಿತ್ತು.

ಆಡಿಟ್ ನಡೆಸಿದಾಗ ಇಬ್ಬರ ವಂಚನೆ ಬಯಲಾಗಿದ್ದು, ಅಲ್ಲದೇ ಬ್ಯಾಗ್ ನಲ್ಲಿ ಹಣ ಕೊಂಡೊಯ್ಯುತ್ತಿದ್ದ ಹಾಗೂ ಚಿನ್ನ ಖರೀದಿಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸಿಬ್ಬಂದಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ವಿರುದ್ಧ ದೂರು ದಾಖಲಾಗಿದೆ.

RELATED ARTICLES
- Advertisment -
Google search engine

Most Popular