ಚಾಮರಾಜನಗರ: ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಜುಲೈ 19ರ ಶುಕ್ರವಾರ ಸಂಜೆ 4:30ಕ್ಕೆ ಅಮಚವಾಡಿ ಗ್ರಾಮದಲ್ಲಿ ವಿಶ್ವ ಹಾವುಗಳ ದಿನ ಅಂಗವಾಗಿ ಪ್ರಾಣಿಗಳ ಸಂರಕ್ಷಣೆ ಹಾಗೂ ಅದರ ಉಪಯೋಗಗಳು. ಹಾವುಗಳನ್ನು ಸಾಯಿಸಬೇಡಿ ,ಸಂರಕ್ಷಿಸಿ ಕಾಡಿಗೆ ಬಿಡೋಣ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡ ಮೋಳೆ ಸುರೇಶ್ ತಿಳಿಸಿದ್ದಾರೆ.