Saturday, April 19, 2025
Google search engine

Homeರಾಜ್ಯಸುದ್ದಿಜಾಲಬಡೇಲಡಕು ಸತೀಶ ಕುಮಾರಗೆ ಪಿಹೆಚ್‍ಡಿ ಪದವಿ ಪ್ರದಾನ

ಬಡೇಲಡಕು ಸತೀಶ ಕುಮಾರಗೆ ಪಿಹೆಚ್‍ಡಿ ಪದವಿ ಪ್ರದಾನ

ಬಳ್ಳಾರಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆರೆಕಾವಲರ ಹಟ್ಟಿ (ಕೆ.ಕೆ.ಹಟ್ಟಿ) ಗ್ರಾಮದ ಬಡೇಲಡಕು ಸತೀಶಕುಮಾರ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಘೋಷಿಸಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಹಾಗೂ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಪ್ರೊ.ರಮೇಶ್ ಓ ಓಲೇಕಾರ ಅವರ ಮಾರ್ಗದರ್ಶನದಲ್ಲಿ ಹಾಗೂ ವ್ಯವಹಾರ ಅಧ್ಯಯನ ನಿಕಾಯದಲ್ಲಿ “ಎ ಸ್ಟಡಿಆಫ್ ಫೈನಾನ್ಸಿಯಲ್ ಲಿಟರೆಸಿ ಆ್ಯಂಡ್ ಇಂಡಿವಿಜುವಲ್ ಇನ್ವೆಸ್ಟರ್ಸ್ ಡಿಸಿಜನ್ ಇನ್ ಷೇರ್ಸ್ ವಿತ್ ಸ್ಪೆಷಿಯಲ್ ರೆಫರೆನ್ಸ್ ಟು ಸೆಲೆಕ್ಟೆಡ್ ಸಿಟಿಸ್ ಇನ್ ಕರ್ನಾಟಕ” ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ನೀಡಲಾಗಿದೆ ಎಂದು ವಿವಿಯ ಪರೀಕ್ಷಾ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular