ಬಾಗಲಕೋಟೆ: ನಂದಿಮಠ ಕಾನೂನು ಮಹಾವಿದ್ಯಾಯಲಯದಲ್ಲಿ ಪ್ರಥಮ ವರ್ಷದ ಎಲ್.ಎಲ್.ಬಿ. ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟದ ಕಬಡ್ಡಿ ಸಮವಸ್ತ್ರವನ್ನು ಪ್ರಾಂಶುಪಾಲರಾದ ಡಾ. ಎಂ ಪಿ ಚಂದ್ರಿಕಾ ಅವರು ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಸಹಾಯ ಪ್ರಾಧ್ಯಾಪಕರಾದ ಭವಾನಿ ಪಾಟೀಲ, ಉಪನ್ಯಾಸಕರಾದ ಸುಧೀಂದ್ರ ಕುಲಕರ್ಣಿ, ಶರಣಬಸವ ಗುರುವಿನ, ರವಿಕುಮಾರ ಕುಂಬಾರ, ನರಹಸಿಂಹ ದೇಸಾಯಿ ಉಪಸ್ಥಿತರಿದ್ದರು.
ಸಮವಸ್ತ್ರ ಕೊಡುಗೆ ನೀಡಿದ ವಿಜಯಕುಮಾರ ಬಿಂಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಲ್ಲಾ ಕ್ರೀಡಾಪಟುಗಳು ಹಾಜರಿದ್ದರು.