ಚಾಮರಾಜನಗರ:ಜಮೀನಿನಲ್ಲಿ ಕೆಲಸ ಮಾಡುವ ವೇಳೆ ರೈತನ ಮೇಲೆ ಕರಡಿ ದಾಳಿ ಮಾಡಿದ್ದು ಪೊನ್ನಾಚ್ಚಿ ಗ್ರಾಮದ ಬಸವಣ್ಣ ಗಾಯಗೊಂಡ ವ್ಯಕ್ತಿ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚ್ಚಿ ಸೇರಿದಂತೆ ಸುತ್ತಮುತ್ತ ಕಾಡುಪ್ರಾಣಿಗಳ ಹಾವಳಿ ಮುಂದುವರೆದಿದ್ದು ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಕರಡಿ ದಾಳಿ ನಡೆಸಿದೆ. ಅದೃಷ್ಟವಶಾತ್ ಪ್ರಾಣಾಯಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಡಾನೆ ಹಾವಳಿಯಿಂದ ಹೈರಣಾಗಿದ್ದ ಅನ್ನದಾತ ,ಕಾಡಾನೆ ಜೊತೆಗೆ ಕರಡಿ ದಾಳಿಯಿಂದಲೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರೈತನ ಮೇಲೆ ಕರಡಿ ದಾಳಿ:ಪ್ರಾಣಾಪಾಯದಿಂದ ಪಾರು
RELATED ARTICLES



