ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ಹಾರ್ಟ್ ಸಂಸ್ಥೆ ಮೈಸೂರು ದೀಪು ಅರಸ್ ಪಾರ್ಥ ಬ್ರಿಕ್ಸ್ ಇಡಸ್ಟ್ರಿ ಆರೋಗ್ಯ ಇಲಾಖೆ ಹೆಚ್. ಡಿ. ಕೋಟೆ, ರಕ್ತ ನಿಧಿ ಕೇಂದ್ರ ಕೆ.ಆರ್ ಆಸ್ಪತ್ರೆ, ತಾಲೂಕು ಅರಸು ಸಂಘ, ವಿಶ್ವಕರ್ಮ ಯುವ ಬ್ರಿಗೇಡ್, ಕರ್ನಾಟಕ ರಕ್ಷಣಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142 ಜನ್ಮ ದಿನದಂದು ಆಯೋಜಸಿದ್ದ ರಕ್ತದಾನ ಶಿಬಿರದಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮತ್ತು ದೀಪ ಬೆಳಗಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ ರವರು ಏಷ್ಯ ಖಂಡದಲ್ಲೇ ಆಳ್ವಿಕೆ ನಡೆಸಿದ ರಾಜ ಮನೆತನಗಳಲ್ಲಿ ಮೈಸೂರು ರಾಜ ಮನೆತನ ತುಂಬಾ ಹೆಸರುವಾಸಿ, ರಾಜ್ಯಕ್ಕೆ ಮೊದಲಿಗೆ ವಿದ್ಯುತ್ ಸ್ಥಾವರ ಆಣೆಕಟ್ಟುಗಳನ್ನು ನಿರ್ಮಿಸಿ ರೈತರ ಬಾಳಲ್ಲಿ ಹೊಸ ಚೈತನ್ಯವನ್ನು ನೀಡಿದ ಮಹಾನ್ ವ್ಯಕ್ತಿ ನಾಲ್ವಡಿ ರವರು ಇವರ ಹುಟ್ಟಿದ ದಿನದಂದು ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿರುವುದು ಶ್ರೇಷ್ಠವಾದ ಕೆಲಸ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ಈ ಶಿಬಿರದಲ್ಲಿ 20 ಜನರು ರಕ್ತದಾನ ಮಾಡಿದರು. ಈ ರಕ್ತದಾನ ಶಿಬಿರದಲ್ಲಿ ಕೆ.ಆರ್. ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ ಕುಸುಮ, ಹಾರ್ಟ್ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ,
ಪಾರ್ಥ ಬ್ರಿಕ್ಸ್ ಮಾಲೀಕರು ಹಾಗೂ ಕೋಟೆ ತಾಲೂಕು ಅರಸು ಸಂಘದ ಉಪಾ ಧ್ಯಕ್ಷರಾದ ದೀಪು ಅರಸ್,
ಕೋಟೆ ತಾಲೂಕು ಅರಸು ಸಂಘದ ಅಧ್ಯಕ್ಷರಾದ ಹೆಚ್. ಎಂ.ಟಿ ಲಿಂಗರಾಜೇ ಅರಸ್, ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್, ಕೋಟೆ ಸಾರ್ವಜನಿಕ ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞರಾದ ಡಾ. ಪ್ರಜ್ವಲ್, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ. ಕುಮಾರಿ, ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ, ಸಿಂಧು ದೀಪು ಅರಸ್, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಇದ್ದರು.