Monday, April 7, 2025
Google search engine

Homeರಾಜ್ಯಸುದ್ದಿಜಾಲಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ದಸರಾ ಗಜಪಡೆ ಪರಿವಾರಕ್ಕೆ ಉಪಹಾರ ಸತ್ಕಾರ

ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ದಸರಾ ಗಜಪಡೆ ಪರಿವಾರಕ್ಕೆ ಉಪಹಾರ ಸತ್ಕಾರ

ಮೈಸೂರು: ಮೈಸೂರು ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಮಾವುತರು ಹಾಗೂ ಕವಾಡಿಗಳು ಹಾಗೂ ಅವರ ಪರಿವಾರಕ್ಕೆ ಸಾಂಪ್ರದಾಯಿಕದಂತೆ ಭಾನುವಾರ ಅರಮನೆ ಆವರಣದಲ್ಲಿ ಉಪಹಾರ ವಿತರಿಸಿದ ಶಾಸಕ ಹರೀಶ್ ಗೌಡ ಬಳಿಕ ಮಾತನಾಡಿದ ಅವರು ಕಾವಾಡಿ ಹಾಗೂ ಮಾವುತರ ಕುಟುಂಬ ಆರೋಗ್ಯದ ಕಡೆ ಗಮನ ನೀಡಬೇಕು, ಹಾಗೂ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ನಿಮ್ಮ ಜೊತೆ ಸದಾ ನಾವು ಇರುತ್ತೇವೆ, ಅರಣ್ಯ ಸಂಪತ್ತಿಗೆ ನಾಡಿನ ಸಂಪತ್ತಾಗಿದೆ, ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ, ನಿಮಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು, ಹಾಗೂ ದಸರಾ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಅಧಿಕಾರಿಗಳಾದ dfo ಪ್ರಭು ಗೌಡ, ಆರ್ ಎಫ್ ಸಂತೋಷ, ಸ್ವಾತಿ ಎಂ ಗೌಡ ,ಮಾಜಿನಗರ ಪಾಲಿಕೆ ಸದಸ್ಯರಾದ ಗೋಪಿ, ಡೆಲ್ಲಿ ರವಿ, ಪ್ರಮೋದ್, ರವಿಚಂದ್ರ, ಸಂತೋಷ್, ಪ್ರಶಾಂತ್, ಸಂದೀಪ್, ವಿನೋದ್ ಅರಸ್, ನಿತಿನ್ ,ಶಿವಕುಮಾರ್, ಪ್ರಜ್ವಲ್, ಗಗನ್, ಜೈ ಶೀಲ್, ಲೋಕೇಶ್, ಗುರುರಾಜ್ ಶೆಟ್ಟಿ, ಮಂಜುನಾಥ್, ನವೀನ್, ಧನುಷ್ , ಶುಭ,ಮಾನ್ಯ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular