Sunday, April 20, 2025
Google search engine

Homeರಾಜ್ಯಗನ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಸಿಡಿದ ಬುಲೆಟ್: ಪೊಲೀಸ್ ಕಮಾಂಡೊಗೆ ಗಾಯ

ಗನ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಸಿಡಿದ ಬುಲೆಟ್: ಪೊಲೀಸ್ ಕಮಾಂಡೊಗೆ ಗಾಯ

ಅಯೋಧ್ಯೆ : ತಮ್ಮ ಗನ್ ಅನ್ನು ಸ್ವಚ್ಛಗೊಳಿಸುವಾಗ, ಅದು ಆಕಸ್ಮಿಕವಾಗಿ ಸಿಡಿದಿದ್ದರಿಂದ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ(ಪಿಎಸಿ)ಯ ಕಮಾಂಡೊ ಒಬ್ಬರು ಗಾಯಗೊಂಡಿರುವ ಘಟನೆ ರಾಮಮಂದಿರ ಸಂಕೀರ್ಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುವನ್ನು ಪ್ಲಟೂನ್ ಕಮಾಂಡರ್ ರಾಮ್ ಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರನ್ನು ತಕ್ಷಣವೇ ಅಯೋಧ್ಯೆ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ನಂತರ ಅವರನ್ನು ಲಕ್ನೊದ ಕೆಜಿಎಂಯು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ರಾಮ್ ಪ್ರಸಾದ್ ಅವರು ತಮ್ಮ ಆಯುಧವನ್ನು ಸ್ವಚ್ಛಗೊಳಿಸುವಾಗ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular