ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚನ್ನಕಲ್ ಕಾವಲು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸಿ.ಎಸ್ ಪ್ರಕಾಶ್ ಆಯ್ಕೆಯಾದರು.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಸಿ.ಎಸ್ ಪ್ರಕಾಶ್ ಹಾಗೂ ಸಿ.ಕೆ ಪ್ರಭಾಕರ ಇಬ್ಬರು ನಾಮಪತ್ರ ಸಲ್ಲಿಸಿದರು. ಸಿ.ಎಸ್ ಪ್ರಕಾಶ್ ಏಳು ಪಡೆದು ಜಯಶೀಲರಾದರು. ಸಿ.ಕೆ ಪ್ರಭಾಕರ ಆರು ಮತಗಳನ್ನು ಪಡೆದು ಪರಭಾವಗೊಂಡರು. ಚುನಾವಣಾಧಿಕಾರಿಯಾಗಿ ಹಾರಂಗಿ ಇಲಾಖೆಯ ಇಂಜಿನಿಯರ್ ರಂಗಯ್ಯ ಕರ್ತವ್ಯನಿರ್ವಹಿಸಿದರು.
ಮುಖಂಡ ಶೇಖರ್ ಮಾತನಾಡಿ ಈ ಅಧ್ಯಕ್ಷ ಆಯ್ಕೆ ಮಾದರಿ ಚುನಾವಣೆ ಆಗಿದೆ. ಅಭ್ಯರ್ಥಿ ಕಾಂಗ್ರೆಸ್ ಪಕ್ಷವಾದರೂ ಆತನ ಗುಣ ಹಾಗೂ ಒಳ್ಳೆತನ ಮೆಚ್ಚಿ ಜೆಡಿಎಸ್ ಸದಸ್ಯರು ಮತ ನೀಡುವ ಮೂಲಕ ಗೆಲುವಿನ ಕಾರಣರಾಗಿದ್ದಾರೆ. ಸಚಿವರಾದ ಕೆ.ವೆಂಕಟೇಶ್, ಮಾಜಿ ಶಾಸಕರಾದ ಕೆ.ಮಹದೇವ್ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಈ ವೇಳೆ ಉಪಾಧ್ಯಕ್ಷ ಧನರಾಜ್, ಸದಸ್ಯರಾದ ಎನ್.ಜೆ ಚಂದ್ರಕಲಾ ರಾಜು, ಎನ್.ಆರ್ ಗಣೇಶ್, ಎನ್.ಕೆ ಸುರೇಶ, ಕಲಾವತಿ, ಶೋಭಾವತಿ ಲೋಕೇಶ್, ಚಂದ್ರಶೇಖರ್, ದೇವಿರಮ್ಮ, ಲೀಲಾವತಿ, ಶಿವಮ್ಮ, ಮಂದಾರ ದಯಾನಂದ, ಮುಖಂಡರಾದ ಸುಂದರೇಗೌಡ, ರಾಜು, ವೆಂಕಟೇಶ್, ಸುರೇಶ್, ಮುರುಳಿ, ಮಹದೇವ, ರಾಮು ಸೇರಿದಂತೆ ಹಲವರು ಇದ್ದರು.