ಮಂಡ್ಯ: ಹೊಸ ಆಟೋ ಪರ್ಮಿಟ್ ರದ್ದು ಹಾಗೂ ಆಪೇ ಆಟೋ ನಗರಕ್ಕೆ ಬರದಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಆಟೋ ಚಾಲಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು, ಅಧಿಕಾರಿಗಳು, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಗರದಲ್ಲಿ 3000 ಸಾವಿರ ಆಟೋ ಗಳು ಚಾಲನೆಯಲ್ಲಿವೆ. ಆಪೇ ಆಟೋಗಳು ನಗರಕ್ಕೆ ಬಂದು ನಗರ ವ್ಯಾಪ್ತಿಯ ಆಟೋಗಳಿಗೆ ತೊಂದರೆಯಾಗಿದೆ. ಜೀವನ ನಡೆಸಲು, ಮಕ್ಕಳಿಗೆ ಶಾಲಾ ಶುಲ್ಕ ಕಟ್ಟುವುದಕ್ಕು ತೊಂದರೆ ಆಗಿದೆ. ಅಧಿಕಾರಿಗಳು ತಕ್ಷಣವೇ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಬಂದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೊಸ ಆಟೋ ಗಳಿಗೆ ಪರ್ಮಿಟ್ ನೀಡದಂತೆ ಚಾಲಕರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರವೀಂದ್ರ, ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.