Saturday, April 19, 2025
Google search engine

Homeರಾಜ್ಯಸುದ್ದಿಜಾಲವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದ ಪ್ರಕರಣ: ನಾಲೆಯಿಂದ ಕಾರು ಹೊರಕ್ಕೆ, ಪತ್ತೆಯಾಗದ ಚಾಲಕನ ಶವ

ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದ ಪ್ರಕರಣ: ನಾಲೆಯಿಂದ ಕಾರು ಹೊರಕ್ಕೆ, ಪತ್ತೆಯಾಗದ ಚಾಲಕನ ಶವ

ಮಂಡ್ಯ: ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ಸಿಬ್ಬಂದಿ ನಾಲೆಯಿಂದ ಕಾರನ್ನು ಕ್ರೇನ್ ಮೂಲಕ ಕಾರು ಹೊರ ತೆಗೆದಿದ್ದಾರೆ.

ಆದರೆ ಕಾರು ಚಾಲಕ ಲೋಕೇಶ್ ಶವ ಇನ್ನೂ ಪತ್ತೆಯಾಗಿಲ್ಲ.

ನೀರಿನಲ್ಲಿ ಕೊಚ್ಚಿ ಹೋಗಿರುವ ಲೋಕೇಶ್ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.  ನಾಲೆಗೆ ಬಿಟ್ಟಿರುವ ನೀರು ನಿಲ್ಲಿಸಲು ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಲಾಗಿದ್ದು, ನೀರು ನಿಲ್ಲಿಸಿ ಶವ ಹುಡುಕಲು ನಿರ್ಧಾರ ಮಾಡಲಾಗಿದೆ.

ನಾಲೆ ಬಳಿ ಸಾವಿರಾರು ಜನರು ಜಮಾಯಿಸಿದ್ದು, ನಾಲೆಯ ಎರಡೂ ಬದಿಗಳಲ್ಲೂ ಸಾಲುಗಟ್ಟಿ ನಿಂತಿದ್ದಾರೆ. ಸ್ಥಳದಲ್ಲಿ ಚಾಲಕ ಲೋಕೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular