Tuesday, July 15, 2025
Google search engine

Homeಅಪರಾಧಕಾನೂನುಜಾತಿ ಹೆಸರಿನಲ್ಲಿ ಅವಹೇಳನೆ: ಜೋಗಿಲ ಸಿದ್ದರಾಜು ವಿರುದ್ಧ ಮಾಡಿದ ಹೇಳಿಕೆಗೆ ನಿರ್ದೇಶಕಿ ಗಾಯತ್ರಿ ವಿರುದ್ಧ ಎಫ್ಐಆರ್

ಜಾತಿ ಹೆಸರಿನಲ್ಲಿ ಅವಹೇಳನೆ: ಜೋಗಿಲ ಸಿದ್ದರಾಜು ವಿರುದ್ಧ ಮಾಡಿದ ಹೇಳಿಕೆಗೆ ನಿರ್ದೇಶಕಿ ಗಾಯತ್ರಿ ವಿರುದ್ಧ ಎಫ್ಐಆರ್

ಬೆಂಗಳೂರು : ಜಾನಪದ ಕಲಾವಿದ ಜೋಗಿಲ ಸಿದ್ದರಾಜುಗೆ ಜಾತಿನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎಂ ಗಾಯತ್ರಿ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಎಸ್‌ಜೆ ಪಾರ್ಕ್ ಠಾಣೆಯಲ್ಲಿ ಗಾಯತ್ರಿ ಅವರ ವಿರುದ್ಧ FIR ದಾಖಲಾಗಿದೆ.

ಜುಲೈ 11ರಂದು ಇಲಾಖೆಯ ನಿರ್ದೇಶಕಿಯನ್ನು ಭೇಟಿಯಾಗಿದ್ದರು. ಪ್ರಾಯೋಜಿತ ತಂಡಗಳ ಸಂಭಾವನೆ ಕೇಳಲು ಸಿದ್ದರಾಜು ಇಲಾಖೆಗೆ ಬಂದಿದ್ದರು. ಸಂಭಾವನೆ ನೀಡುವಂತೆ ಸಿದ್ದರಜು ಮನವಿ ಮಾಡಿದ್ದಾರೆ. ಈ ವೇಳೆ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಟೇಬಲ್ ಮೇಲೆ ವಸ್ತುಗಳನ್ನು ಬಿಸಾಡಿ ಹಲ್ಲೆ ಮಾಡಿದ್ದಾರೆ ಎಂದು ಸಿದ್ದರಾಜು ಆರೋಪಿಸಿದ್ದು, ಈ ಸಂಬಂಧ ಸಿದ್ದರಾಜು ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಹಾಗಾಗಿ ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆಎಂ ಗಾಯತ್ರಿ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular