ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿದ್ಯೆಗೆ ಯಾವ ಜಾತಿ ಮತ್ತು ಅಂತಸ್ತು ಬೇಕಿಲ್ಲ ಕಠಿಣ ಪರಿಶ್ರಮ ಮಾತ್ರ ಮುಖ್ಯ ಎಂಬುದಕ್ಕೆ ಎ.ಸಿ.ಪ್ರೀತಿ ಅವರೇ ಸಾಕ್ಷಿ ಎಂದು ಪುರಸಭೆ ಸದಸ್ಯ ಕೆ.ಎಲ್.ಜಗದೀಶ್ ಹೇಳಿದರು. ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಗುರುವಾರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 263ನೇ ಸ್ಥಾನ ಪಡೆದ ಎ.ಸಿ. ಪ್ರೀತಿ ಹಾಗೂ ಅವರ ತಂದೆ ತಾಯಿಯನ್ನು ಸನ್ಮಾನಿಸಿ ಮಾತನಾಡಿದರು.
ವಿದ್ಯೆ ಎಂಬುದು ಯಾರೊಬ್ಬನ್ನ ಸ್ವತ್ತಲ್ಲ ಪರಿಶ್ರಮ ಪಟ್ಟರೆ ಏನು ಬೇಕಾದರೂ ಸಾಧಿಸಬಹುದು ಆದರೆ ನಾವು ಮುಂದೆ ಏನಾಗಬೇಕೆಂಬ ಗುರಿ ಇಟ್ಟು ಕೊಂಡಿರಬೇಕು ಸೋತರೂ ಕುಗ್ಗದೆ ಗೆದ್ದರೂ ಹಿಗ್ಗದೆ ತಮ್ಮ ಸಾಧನೆ ಒಂದೆ ಗುರಿ ಎಂಬುದನ್ನು ಅರಿತು ಓದಿನ ಕಡೆದ ಗಮನಹರಿಸಿದಾಗ ಮಾತ್ರ ಈ ರೀತಿಯ ಸಾಧನೆಗಳನ್ನು ಮಾಡಲು ಸಾಧ್ಯ ಆದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರೀತಿ ಅವರನ್ನು ಸ್ಪೂರ್ತಿ ಯಾಗಿ ತೆಗೆದು ಕೊಳ್ಳಬೇಕು ಎಂದರು.
ಎ.ಸಿ.ಪ್ರೀತಿಯವರು ಬಡಕುಟುಂಬದಿಂದ ಬಂದರೂ ತನ್ನ ಛಲಬಿಡದೆ ತನ್ನ ಗುರಿಯನ್ನು ಮುಟ್ಟಿರುವುದು ಅವರ ತಂದೆ ತಾಯಿಯವರಿಗೂ ಕಲಿತ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದ ಅವರು ಯುಪಿಎಸ್ಸಿ ಅಂತಹ ಮಹಾ ಪರೀಕ್ಷೆ ಯಲ್ಲಿ ದೇಶಕ್ಕೆ 263 ಸ್ಥಾನ ಬಂದಿರುವುದು ಸಂತಸ ತಂದಿದೆ ಎಂದು ಬಣಿಸಿದರು.
ಶ್ರದ್ದೆ ಮತ್ತು ಆಸಕ್ತಿ ಇದ್ದರೆ ಯಾವ ಖಾಸಗಿ ಶಾಲೆಗಳ ಅವಶ್ಯಕತೆ ಇಲ್ಲ ತನ್ನ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದ್ದರೆ ಮಾತ್ರ ಉನ್ನತ ಮತ್ತು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವೆಂಬ ಮನಸ್ಥಿಯಲ್ಲಿರುವ ಪೋಷಕರು ಇಂತಹ ಸಾಧಕರನ್ನು ಪ್ರೇರಣೆಯಾಗಿ ತೆಗೆದು ಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರ್ಪಡೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂರ್ಧದಲ್ಲಿ ಎ.ಪಿ.ಪ್ರೀತಿ ಮಾತನಾಡಿ ನಾನು ಎರಡು ಪ್ರಯತ್ನದಲ್ಲಿ ವಿಫಲವಾದಾಗ ಆಸೆ ಕೈ ಬಿಟ್ಟಿದ್ದೆ. ತಂದೆಯವರ ಒತ್ತಾಸೆಯಿಂದಾಗಿ ಮೂರನೇ ಪ್ರಯತ್ನ ಮಾಡಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದು ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 263ನೇ ಸ್ಥಾನ ಪಡೆದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಅಂಕನಹಳ್ಳಿ ಗ್ರಾಮದಲ್ಲಿ ಜನಿಸಿ ಎಸ್ಎಸ್ಎಲ್ಸಿ ವರೆಗೆ ಇಲ್ಲಿಯೆ ಶಿಕ್ಷಣ ಪಡೆದು, ನಂತರ ಪಿಯುಸಿಯನ್ನು ಕೆ ಆರ್ ನಗರದ ಸರ್ಕಾರಿ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಬಡತನ ಇದ್ದರೂ ಕೃಷಿಯಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದು ಯುಪಿಎಸ್ಸಿ ಸಾಧನೆಯ ಕನಸು ಕಂಡಿದೆ ಎಂದರು.
ಮೊದಲೆರಡು ಪ್ರಿಲಿಮನ್ನರಿ ಪರೀಕ್ಷೆಯಲ್ಲಿ ಫೇಲಾಗಿದ್ದ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯಿಂದಾಗಿ ಉನ್ನತ ಹುದ್ದೆ ಅಲಂಕರಿಸುವ ಕನಸನ್ನು ಕೈಚೆಲ್ಲಿದ್ದೆ ಆದ್ದರೆ ವೃತ್ತಿಯಲ್ಲಿ ಅಡುಗೆಭಟ್ಟರಾಗಿರುವ ನನ್ನ ತಂದೆ ಚನ್ನಬಸಪ್ಪ ಅವರು ನನಗೆ ಧೈರ್ಯ ತುಂಬಿ ಎಷ್ಟು ಖರ್ಚಾದರೂ ನಾನು ಭರಿಸುವೆ. ಇದೊಂದು ಬಾರಿ ಪ್ರಯತ್ನ ಪಡು ಎಂದು ಹುರಿದುಂಬಿಸಿದ್ದು ನನ್ನಗೆ ಪ್ರೇರಣೆ ದೊರೆತ್ತಿದ್ದು ತಂದೆಯವರ ಸ್ಥೈರ್ಯದ ಮಾತುಗಳಿಂದ ಪ್ರೇರೆಪಿತಲಾದ ನಾನು ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದು ಮೂರನೇ ಬಾರಿಗೆ ಯಶಸ್ಸು ಕಂಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿಳಿಬ್ಬರು ನನ್ನ ಸಾಧನೆಗೆ ಸ್ಫೂರ್ತಿ . ನನ್ನ ಹುಟ್ಟೂರು ಜನತೆಯ ಆಶೀರ್ವಾದ, ನನ್ನೂರ ಜನತೆ ನನ್ನ ಮೇಲಿಟ್ಟಿದ ನಂಬಿಕೆ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನನ್ನ ಶ್ರಮ ಶೇಕಡ 40. ನನ್ನ ತಂದೆ, ತಾಯಿಯ ಪರಿಶ್ರಮ ಉಳಿದ 60ರಷ್ಟು. ನನ್ನ ತಂದೆ ತಾಯಿಯೇ ನಿಜವಾದ ಸಾಧಕರು ಎಂದರೆ ತಪ್ಪಾಗಲಾರದು ಎಂದು ಖುಷಿಪಟ್ಟರು. ಕರ್ನಾಟಕ ಇಲ್ಲವೇ ಮಹಾರಾಷ್ಟ್ರ ಕೇಡರ್ ನಲ್ಲಿ ಐಎಎಸ್ ಅಧಿಕಾರಿಯಾಗುವ ಅವಕಾಶ ನನಗಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕ ಕೆ. ಎಲ್. ರಮೇಶ್ ಅವರ ನೇತೃತ್ವದಲ್ಲಿ ಎ.ಸಿ. ಪ್ರೀತಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು. ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಶೇಖರ್, ನಂಜನಗೂಡು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ದೀಪು, ಶಿಕ್ಷಕ ಪುರುಷೋತ್ತಮ್, ಮುಖಂಡ ಅಪೋಲೋ ಮಹೇಶ್, ಹಾರಂಗಿ ಮಹಾಮಂಡಲದ ನಿರ್ದೇಶಕ ಅಂಕನಹಳ್ಳಿ ಯತೀಶ್, ಪ್ರೀತಿ ಅವರ ತಂದೆ ಚನ್ನಬಸಪ್ಪ, ತಾಯಿ ನೇತ್ರಾವತಿ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
