Tuesday, April 22, 2025
Google search engine

Homeರಾಜ್ಯಕ್ರೀಡಾಪಟುಗಳ ಶತ ಪದಕಗಳ ಸಂಭ್ರಮ: ಅ.9 ರಂದು ವಿನೂತನ ಕಾರ್ಯಕ್ರಮ

ಕ್ರೀಡಾಪಟುಗಳ ಶತ ಪದಕಗಳ ಸಂಭ್ರಮ: ಅ.9 ರಂದು ವಿನೂತನ ಕಾರ್ಯಕ್ರಮ

ಚಾಮರಾಜನಗರ: ಜೈಹಿಂದ್ ಪ್ರತಿಷ್ಠಾನ , ಋಗ್ವೇದಿ ಯೂತ್ ಕ್ಲಬ್  ಹಾಗೂ ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗಳಿಸಿ ಭಾರತದ ಕೀರ್ತಿಯನ್ನು ವಿಶ್ವವಿಖ್ಯಾತ ಗೊಳಿಸಿ, ಕ್ರೀಡಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ನೈತಿಕ ಬೆಂಬಲವಾಗಿ ಕ್ರೀಡಾಪಟುಗಳ ಶತ ಪದಕಗಳ ಸಂಭ್ರಮ, ಕ್ರೀಡಾಭಿಮಾನಿಗಳ ಕೋಟಿ ಅಭಿವಂದನೆ ಎಂಬ ವಿನೂತನ ಕಾರ್ಯಕ್ರಮವನ್ನು ತಾಲೂಕಿನ  ಅಮಚವಾಡಿ ಗ್ರಾಮದಲ್ಲಿ ಅಕ್ಟೋಬರ್ 9 ಸೋಮವಾರ ಸಂಜೆ 4:15ಕ್ಕೆ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್  ಋಗ್ವೇದಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಕುರಿತು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್  ಋಗ್ವೇದಿ ,  ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular