ಚಾಮರಾಜನಗರ: ಹುಲಿಗಳ ನಾಡು ಎಂದೇ ಪ್ರಸಿದ್ಧವಾಗಿರುವ ಚಾಮರಾಜನಗರ ಹುಲಿಗಳ ಸಂರಕ್ಷಣೆಯಲ್ಲಿ ವಿಶ್ವ ವಿಖ್ಯಾತಿಯನ್ನು ಪಡೆಯಲಿ. ಚಾಮರಾಜನಗರ ಅರಣ್ಯಗಳ ಪ್ರದೇಶವಾಗಿದ್ದು ಹುಲಿಗಳನ್ನು ಸಂರಕ್ಷಿಸುವ ಮೂಲಕ ವಿಶ್ವ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹುಲಿಗಳ ದಿನ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡ ಹುಲಿಗಳ ಲೇಖನಗಳ ಓದುವಿಕೆ ಮೂಲಕ ಉದ್ಘಾಟಿಸಿ ಅರಣ್ಯವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಉಂಟಾಗಬೇಕು. ಜುಲೈ 29 ಹುಲಿಗಳ ದಿನ ವಾಗಿದೆ. 50 ವರ್ಷಗಳ ಹಿಂದೆ ಭಾರತದಲ್ಲಿ ಹುಲಿಗಳ ಸಂರಕ್ಷಣೆಗಾಗಿ ರೂಪಿಸಿದ ಯೋಜನೆ ಸರ್ಕಾರ ಹಾಗೂ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ವಿಶೇಷ ಜಾಗೃತಿಯ ಹಿನ್ನೆಲೆಯಲ್ಲಿ ಇಂದು ಹುಲಿಗಳ ಸಂಖ್ಯೆ ಗಣನೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಸಮೀಕ್ಷೆಯ ಪ್ರಕಾರ 4000ಕ್ಕೂ ಹೆಚ್ಚು ಹುಲಿಗಳು ಇರುವುದು ಅಲ್ಲದೆ ಚಾಮರಾಜನಗರದ ಬಂಡೀಪುರ ,ಬಿಳಿಗಿರಿರಂಗನ ಬೆಟ್ಟ ,ಮಲೆಯ ಮಹದೇಶ್ವರ ಬೆಟ್ಟ ಹುಲಿಯೋಜನೆಗಳು ವಿಶ್ವ ಪ್ರಸಿದ್ಧವಾಗಿರುವುದು ಮತ್ತಷ್ಟು ಹೆಮ್ಮೆಯಾಗಿದೆ. ಬಂಡಿಪುರ ಹುಲಿ ಯೋಜನೆಯ ಮೂಲಕ ವಿಶ್ವ ವಿಖ್ಯಾತಿಯಾಗಿರುವ ಚಾಮರಾಜನಗರ ಜಿಲ್ಲೆ ವಿಶೇಷ ಪ್ರವಾಸೋದ್ಯಮ ಕೇಂದ್ರವಾಗಲಿ, ಆ ಮೂಲಕ ಜಿಲ್ಲೆ ಉದ್ಯಮಗಳನ್ನು ಸ್ಥಾಪನೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಯಾಗಲಿ. ಕೇಂದ್ರ ಸರ್ಕಾರ ಅರಣ್ಯದ ಸಂರಕ್ಷಣೆಗೆ ಮತ್ತಷ್ಟು ವಿಶೇಷ ನೀತಿ ನಿಯಮಗಳನ್ನು ಜಾರಿಗೆ ತಂದು ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಲಿ ಎಂದು ತಿಳಿಸುತ್ತಾ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿರುವ ಸರ್ಕಾರಕ್ಕೆ ಸಾರ್ವಜನಿಕರಿಗೆ ವಿಶೇಷವಾಗಿ ಅರಣ್ಯ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಜೈಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀನಿವಾಸ್ ಮಾತನಾಡಿ ಅರಣ್ಯ ಸಂರಕ್ಷಣೆ ಮತ್ತು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಕಾಡಂಚಿನ ಪ್ರದೇಶಗಳಲ್ಲಿ ಪೂರ್ಣ ವಿಶ್ವಾಸವನ್ನು ಜನರಲ್ಲಿ ತುಂಬಿ ಕಾಡನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಅವರ ಸಹಕಾರ ಪಡೆಯಬೇಕು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ವಿಶೇಷ ಧನ್ಯವಾದಗಳು ಅರ್ಪಿಸೋಣ ಎಂದರು.
ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ಎಸ್ ಋಗ್ವೇದಿ, ರ, ಕಿಶೋರ್, ಜೈ ಹಿಂದ್ ಪ್ರತಿಷ್ಠಾನದ ರವಿ, ಶ್ರೀನಿವಾಸ್, ಸುಹಾಸ್ ಭಾರದ್ವಾಜ್, ಮಹದೇವ ಮುಂತಾದವರು ಉಪಸ್ಥಿತರಿದ್ದರು.