Monday, June 23, 2025
Google search engine

Homeಸ್ಥಳೀಯಆಷಾಢ ಶುಕ್ರವಾರದ ಭಕ್ತಿ ಸನ್ನಿವೇಶಕ್ಕೆ ಸಜ್ಜಾದ ಚಾಮುಂಡೇಶ್ವರಿ ಬೆಟ್ಟ

ಆಷಾಢ ಶುಕ್ರವಾರದ ಭಕ್ತಿ ಸನ್ನಿವೇಶಕ್ಕೆ ಸಜ್ಜಾದ ಚಾಮುಂಡೇಶ್ವರಿ ಬೆಟ್ಟ

ಮೈಸೂರು: ಈ ವರ್ಷದ ಆಷಾಢ ಶುಕ್ರವಾರ ಜೂನ್ 27 ರಿಂದ ಪ್ರಾರಂಭವಾಗಲಿದ್ದು, ಮೈಸೂರು ನಗರದ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನ ಈ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದೆ. ಭಕ್ತಾದಿಗಳ ಹೆಚ್ಚಿನ ಸಂಖ್ಯೆಯ ಆಗಮನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿವಿಧ ಇಲಾಖೆಗಳು, ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರ ಮತ್ತು ಜಿಲ್ಲಾ ಆಡಳಿತ ಪ್ರಮುಖ ವ್ಯವಸ್ಥೆಗಳನ್ನು ಮಾಡಿವೆ.

ಮಹತ್ವಪೂರ್ಣವಾಗಿ, ಭಕ್ತರು 300 ರೂಪಾಯಿ ದರ್ಶನ ಟಿಕೆಟ್‌ಗಳು ಕೇವಲ ನಗರ ಬಸ್ ನಿಲ್ದಾಣದಲ್ಲಿಯೇ ಪಡೆದುಕೊಳ್ಳಬೇಕಾಗುತ್ತದೆ. ಬೆಟ್ಟದ ಮೇಲ್ಭಾಗದಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ನಗರದ ಬಸ್ ನಿಲ್ದಾಣದಲ್ಲಿ ಎರಡು ಕೌಂಟರ್‌ಗಳನ್ನು ನಿರ್ಮಿಸಿ, ಪ್ರತಿದಿನ 300 ಟಿಕೆಟ್‌ಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಲಲಿತ ಮಹಲ್ ಪಾರ್ಕಿಂಗ್ ಲಾಟ್ ನಲ್ಲಿ ಮೂರು ಕೌಂಟರ್ ಬಸ್ ಬೇ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ . ಜನರಲ್ ಹಾಗೂ 300 ಹಾಗೂ 2000 ಕೌಂಟರ್ ಗಳನ್ನು ತೆರೆಯಲಾಗುತ್ತಿದೆ. ಲಲಿತ ಮಹಲ್ ಹೆಲಿಪಾಡ್ ನಲ್ಲಿ ಹತ್ತರಿಂದ ಹದಿನೈದು ಟಿಕೆಟ್ ಕೌಂಟರ್ ಗಳನ್ನು ತೆರೆಯಲಾಗುತ್ತಿದೆ. UPI, ಫೋನ್ ಪೇ, ಗೂಗಲ್ ಪೇ ಪಾವತಿಯ ಸಲುವಾಗಿ ಪ್ರತ್ಯೇಕ ಸಾಲುಗಳ ವ್ಯವಸ್ಥೆಯೂ ಇದೆ.

ಬಸ್ ವ್ಯವಸ್ಥೆ:
– ಜನರಲ್ ಬಸ್‌ಗಳಿಗೆ ಮತ್ತು 2000 ರೂ. ವೋಲ್ವೋ ಬಸ್‌ಗಳಿಗೆ ವಿಭಿನ್ನ ಸಾಲುಗಳ ವ್ಯವಸ್ಥೆ
– ಖಾಸಗಿ ವಾಹನಗಳಿಗೆ ಬೆಟ್ಟದ ಮೇಲ್ಭಾಗ ಪ್ರವೇಶವಿಲ್ಲ
– 300 ರೂ. ಟಿಕೆಟ್ ಪಡೆದವರಿಗೆ ಶ್ರೇಣಿಬದ್ಧ ವ್ಯವಸ್ಥೆ, ಡ್ರೈ ಫ್ರೂಟ್ ಪ್ಯಾಕೆಟ್ ಹಂಚಿಕೆ
– ವಿಶೇಷ ಚೇತನರಿಗೆ ವೀಲ್‌ಚೇರ್, ಮೆಡಿಕಲ್, ಅಂಬುಲೆನ್ಸ್ ವ್ಯವಸ್ಥೆ

ದರ್ಶನ ವ್ಯವಸ್ಥೆ:
– 300 ರೂ. ಟಿಕೆಟ್ ಪಡೆದವರಿಗೆ 30 ರೂ. ಟಿಕೆಟ್ ಹೊಂದಿದ ಭಕ್ತರೊಂದಿಗೆ ಸೇರಿಸಿ, ಬ್ಯಾರಿಕೇಡ್ ಮೂಲಕ ಪ್ರತ್ಯೇಕ ದರ್ಶನ
– ಧರ್ಮ ದರ್ಶನಕ್ಕು ಪ್ರತ್ಯೇಕ ಕ್ಯೂ
– ಗರ್ಭಗುಡಿಗೆ ನೇರ ಪ್ರವೇಶ ನಿರ್ಬಂಧ
– 2000 ರೂ. ಟಿಕೆಟ್ ಪಡೆದವರಿಗೆ ಪ್ರತ್ಯೇಕ ದರ್ಶನ ಮಾರ್ಗ, ನೀರಿನ ಬಾಟಲ್, ಲಾಡು, ಕುಂಕುಮ ವಿತರಣೆ

ಪೌಷ್ಟಿಕ ಪಾನೀಯ ಮತ್ತು ಪ್ರಸಾದ:
– ಬಾದಾಮಿ ಹಾಲು ಎಲ್ಲ ವಲಯಗಳಲ್ಲಿ
– ಒಟ್ಟು 3 ವಲಯಗಳಾಗಿ ವಿಭಾಗ
– 18 ವರ್ಷ ಮೇಲ್ಪಟ್ಟ ಮಹಿಳಾ ಭಕ್ತರಿಗೆ ಕುಂಕುಮ, ಬಳೆ ಮತ್ತು ಮಡಲಕ್ಕಿ ಪ್ಯಾಕೆಟ್‌ಗಳು
– ಲಡ್ಡು ವಿತರಣೆ ನಂದಿನಿ ಡೈರಿಯಿಂದ
– ಶ್ರೀಚಕ್ರ ಕುಂಕುಮ, ರಕ್ಷಣಾ ದಾರ ಮಾರಾಟಕ್ಕೆ, ಆದರೆ ದರ ಇನ್ನೂ ನಿಗದಿಯಾಗಿಲ್ಲ

ಸೌಲಭ್ಯಗಳು:
– ಶೌಚಾಲಯಗಳು ಐದು ಸ್ಥಳಗಳಲ್ಲಿ
– ಪಾನೀಯ ನೀರು, ವಿದ್ಯುತ್ ವ್ಯವಸ್ಥೆ
– ದಾಸೋಹ ಭವನ ಮತ್ತು ಬಸ್‌ಸ್ಟ್ಯಾಂಡ್ ಒಳಗೆ ಉಚಿತ ಊಟದ ವ್ಯವಸ್ಥೆ
– ಎಲ್ಲಾ ವಿಭಾಗಗಳಲ್ಲಿ ಲೈಟಿಂಗ್ ಮತ್ತು ಪಾರ್ಕಿಂಗ್ ವ್ಯವಸ್ಥೆ
– ಎಐ ಕ್ಯಾಮೆರಾ ನಿಗಾದೊಂದಿಗೆ ಭದ್ರತೆ

ನಮ್ಮ ಮೈಸೂರು ಫೌಂಡೇಶನ್ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜೆಂಟ್ ನವರು ಚಾಮುಂಡಿ ಬೆಟ್ಟದಲ್ಲಿ ಬರುವ ವೆಸ್ಟೇಜ್ ಗಳನ್ನು ಶುಚಿ ಮಾಡುವ ಹೊಣೆ ಹೊತ್ತಿದ್ದಾರೆ.ಚಾಮುಂಡಿ ಬೆಟ್ಟ ಮೆಟ್ಟಿಲು ಹತ್ತಿ ಬರುವ ಭಕ್ತರನ್ನು 30 ರೂಪಾಯಿ ಟಿಕೆಟ್ ಕೌಂರ್ಟ ಬಳಿ ಸೇರಿಸಲಾಗುತ್ತದೆ ಅವರನ್ನು ಜನರಲ್ ಕ್ಯೂ ಮುಂದೆ ಬಂದು ಕನೆಕ್ಟ್ ಆದಾಗ ಅಲ್ಲಿಂದ ಅವರು ದರ್ಶನ ಪಡೆಯಬಹುದು.

ಭಕ್ತಾದಿಗಳು ದರ್ಶನ ಮಾಡಿಕೊಂಡು ವಾಪಸ್ ಬಸ್ ಹತ್ತುವಾಗ ಎರಡು ಕಡೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಬಸ್ ಸ್ಟ್ಯಾಂಡ್ ಒಳಗಡೆ ಊಟದ ವ್ಯವಸ್ಥೆ ಇರುತ್ತದೆ ಹಾಗೂ ದಾಸೋಹ ಭವನದಲ್ಲೂ ಊಟದ ವ್ಯವಸ್ಥೆ ಇರುತ್ತದೆ. ಎಲ್ಲಾ ಕಡೆ ನೀರು ಕರೆಂಟು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

ಆಷಾಢ ಶುಕ್ರವಾರಗಳಿಗಾಗಿಯೇ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಮತ್ತು ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಐದು ಸಭೆಗಳನ್ನು ನಡೆಸಿ, ವ್ಯವಸ್ಥೆಗಳನ್ನು ಆಳವಾಗಿ ಪರಿಶೀಲಿಸಲಾಗಿದೆ ಎಂದು ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿ ಜೆ.ಎ. ರೂಪಾ ತಿಳಿಸಿದರು.

ಈ ಆಷಾಢ ಶುಕ್ರವಾರಗಳ ಪೂಜಾ ಮಹೋತ್ಸವಕ್ಕೆ ವ್ಯವಸ್ಥೆ, ಭದ್ರತೆ, ಶುದ್ಧತೆ, ಹಾಗೂ ಭಕ್ತರ ಅನುಕೂಲಗಳ ಆಧಾರದ ಮೇಲೆ ಸಂಪೂರ್ಣ ಸಜ್ಜಾಗಿದೆ ಚಾಮುಂಡೇಶ್ವರಿ ಬೆಟ್ಟ. ಭಕ್ತರು ನಿಯಮಗಳನ್ನು ಪಾಲಿಸಿ, ಸರಳವಾಗಿ ಮತ್ತು ಶ್ರದ್ಧೆಯಿಂದ ದರ್ಶನ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular