Monday, April 21, 2025
Google search engine

Homeಅಪರಾಧನಡೆದಾಡುವ ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ: ಓರ್ವನ ಕೊಲೆ

ನಡೆದಾಡುವ ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ: ಓರ್ವನ ಕೊಲೆ

ದೇವನಹಳ್ಳಿ: ನಡೆದಾಡುವ ದಾರಿ ವಿಚಾರಕ್ಕೆ ಎರಡು‌ ಗುಂಪುಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಮಂಡಿಬೆಲೆ ಗ್ರಾಮದಲ್ಲಿ ಕಳೆದ ರಾತ್ರಿ‌ ಗ್ರಾಮದ ಗಜೇಂದ್ರ ಹಾಗೂ ಪಕ್ಕದ ಮನೆಯ ಮೋಹನ್ ವಿಜಿ‌ ನಡುವೆ ಗಲಾಟೆಯಾಗಿದೆ.

ಗಲಾಟೆ ವೇಳೆ ಮೋಹನ್ ವಿಜಿ ಹೊರಗಿನವರನ್ನ ಕರೆಸಿದ್ದು ಗಲಾಟೆ ಜೋರಾಗಿದೆ. ಮೊದಲು ಮೋಹನ್ ಹಾಗೂ ಮೂವರ ಮೇಲೆ ಗಜೇಂದ್ರ ಚಾಕು ಇರಿದಿದ್ದು, ಚಾಕು ಇರಿಯುತ್ತಿದ್ದಂತೆ ಗಜೇಂದ್ರನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.

ಕೊಲೆಯಾದ ಗಜೇಂದ್ರ ಮೃತದೇಹ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಮೋಹನ್, ವಿಜಿ, ಲಿಖಿತ್​ ಗೆ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಎರಡು ಗುಂಪುಗಳ ನಡುವಿನ ಗಲಾಟೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular