Sunday, April 20, 2025
Google search engine

Homeರಾಜ್ಯಸಿಎಂ ಸಿದ್ದರಾಮಯ್ಯ ಆಗಮನ:  ಕಿತ್ತು ಹೋದ ರಸ್ತೆ ತರಾತುರಿಯಲ್ಲಿ ತೇಪೆ ಕಾರ್ಯ

ಸಿಎಂ ಸಿದ್ದರಾಮಯ್ಯ ಆಗಮನ:  ಕಿತ್ತು ಹೋದ ರಸ್ತೆ ತರಾತುರಿಯಲ್ಲಿ ತೇಪೆ ಕಾರ್ಯ

ಮಂಡ್ಯ: ಮಂಡ್ಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕಿತ್ತು ಹೋದ ರಸ್ತೆಗೆ ತರಾತುರಿಯಲ್ಲಿ ತೇಪೆ ಕಾರ್ಯ ಮಾಡಲಾಗುತ್ತಿದೆ.

ಅಂತರ ಜಿಲ್ಲಾ ಪತ್ರಕರ್ತರ ಸಮ್ಮೇಳನ, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಭಾಗವಹಿಸಲಿದ್ದು, ಸಿಎಂ ಸಂಚರಿಸುವ ನಗರದ ಬೆಂಗಳೂರು-ಮೈಸೂರು ಹೆದ್ದಾರಿ, ಜಿಲ್ಲಾ ಪಂಚಾಯಿತಿ ರಸ್ತೆಗೆ ತೇಪೆ ಕಾರ್ಯ ಮಾಡಲಾಗುತ್ತಿದೆ.

ನವ ವಧುವಿನಂತೆ ಸಿಂಗಾರಗೊಂಡ ಮಂಡ್ಯ

ನಗರದ ತುಂಬೆಲ್ಲಾ ಸಿಎಂ ಸಿದ್ದರಾಮಯ್ಯಗೆ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ.

ಮಂಡ್ಯ ನಗರದ ರಸ್ತೆ ಇಕ್ಕೆಲಗಳು, ಹೈವೇ ಡಿವೈಡರ್ ಗಳನ್ನು ಫ್ಲೆಕ್ಸ್, ಬ್ಯಾನರ್ ಗಳು ಆವರಿಸಿವೆ. ತಳಿರು, ತೋರಣ ಕಟ್ಟಿ ಸಿಎಂಗೆ ಅದ್ಧೂರಿ ಸ್ವಾಗತ ಕೋರಲು ಸಜ್ಜು ಮಾಡಿಕೊಳ್ಳಲಾಗಿದೆ.

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ಬೆಂಬಲಿಗರಿಂದ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular