Sunday, April 20, 2025
Google search engine

Homeಅಪರಾಧಮಿನಿ ಬಸ್, ಕಂಟೈನರ್ ನಡುವೆ ಢಿಕ್ಕಿ: ೧೨ ಮಂದಿ ಮೃತ್ಯು

ಮಿನಿ ಬಸ್, ಕಂಟೈನರ್ ನಡುವೆ ಢಿಕ್ಕಿ: ೧೨ ಮಂದಿ ಮೃತ್ಯು

ಮಹಾರಾಷ್ಟ್ರ : ಇಲ್ಲಿನ ವೈಜಾಪುರ ಸಮೀಪದ ಸಮೃದ್ಧಿ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಮಗು ಸೇರಿ ಒಟ್ಟು ೧೨ ಮಂದಿ ಸಾವನ್ನಪ್ಪಿದ್ದು, ೨೦ಕ್ಕೂ ಆದಿಕ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವೈಜಾಪುರ ಮತ್ತು ಚಿ. ಸಂಭಾಜಿನಗರದ ಘಾಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಇಲ್ಲಿನ ಸೈಲಾನಿ ಬಾಬಾ ದರ್ಶನಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.
ವೈಜಾಪುರ ಸಮೀಪದ ಸಮೃದ್ಧಿ ಹೆದ್ದಾರಿಯ ಜಾಂಬರ ಗ್ರಾಮದ ಟೋಲ್ ಬೂತ್ ನಲ್ಲಿ ಈ ದುರ್ಘಟನೆ ನಡೆದಿದೆ. ಭಕ್ತರನ್ನು ಹೊತ್ತು ಸಾಗುತ್ತಿದ್ದ ಟೆಂಪೋ ಟ್ರಾವೆಲರ್ ಹೆದ್ದಾರಿ ಬದಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಭಕ್ತರೆಲ್ಲರು ನಾಸಿಕ್ ಜಿಲ್ಲೆಯ ಪಥರ್ಡಿ ಮತ್ತು ಇಂದಿರಾನಗರ ನಿವಾಸಿಗಳು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES
- Advertisment -
Google search engine

Most Popular