ಮೈಸೂರು: ಕದಂಬ ರಂಗ ವೇದಿಕೆ ವತಿಯಿಂದ ಇಂದು ಮಾ.೧೫ರಂದು ಸಂಜೆ ೬.೩೦ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ರೋಟರಿ ಕದಂಬ ರಂಗಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಈ ವೇಳೆ ಬೆಂಗಳೂರಿನ ಪಯಣ ರಂಗ ತಂಡದ ವತಿಯಿಂದ ನಮ್ಗೇನ್ ಬೆಲೆನೇ ಇಲ್ವಾ ಎಂಬ ಹಾಸ್ಯಮಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು. ಕಾರ್ಯಕ್ರಮದಲ್ಲಿ ಈ ಬಾರಿ ಪ್ರಶಸ್ತಿಗಳನ್ನು ಶೈಲಜಾ, ಗೆಜ್ಜೆಹೆಜ್ಜೆ ಉದಯಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದೆಂದರು.