Friday, April 18, 2025
Google search engine

Homeಅಪರಾಧಕಾನೂನುಭ್ರಷ್ಟಾಚಾರ ಪ್ರಕರಣ:  ಅರವಿಂದ ಕೇಜ್ರಿವಾಲ್‌ 3 ದಿನ ಸಿಬಿಐ ಕಸ್ಟಡಿಗೆ

ಭ್ರಷ್ಟಾಚಾರ ಪ್ರಕರಣ:  ಅರವಿಂದ ಕೇಜ್ರಿವಾಲ್‌ 3 ದಿನ ಸಿಬಿಐ ಕಸ್ಟಡಿಗೆ

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದ ಭ್ರಷ್ಟಾಚಾರ ಆರೋಪದಲ್ಲಿ ಸಿಬಿಐನಿಂದ ಬಂಧನವಾಗಿರುವ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ದಿಲ್ಲಿ ನ್ಯಾಯಾಲಯ ಬುಧವಾರ 3 ದಿನಗಳ ಅವಧಿಗೆ ಸಿಬಿಐ ವಶಕ್ಕೊಪ್ಪಿಸಿದೆ.

ಪ್ರಕರಣ ಸಂಬಂಧಿಸಿದಂತೆ ತಿಹಾರ್‌ ಜೈಲಿನಿಂದಲೇ ಮಂಗಳವಾರ ಕೇಜ್ರಿವಾಲ್‌ರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬುಧವಾರ ಅವರನ್ನು ಬಂಧಿಸಿ ದಿಲ್ಲಿಯ ರೋಸ್‌ ಅವೆನ್ಯೂ ಕೋರ್ಟ್‌ನ ನ್ಯಾ| ಅಮಿತಾಭ್‌ ರಾವತ್‌ ಅವರ ಎದುರು ಹಾಜರುಪಡಿಸಿ, 5 ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ ನ್ಯಾಯಾಧೀಶರು ಕೇವಲ 3 ದಿನಗಳ ಕಸ್ಟಡಿಗೆ ಸಮ್ಮತಿಸಿದ್ದು, ಜೂ.29ರ ಸಂಜೆ 7 ಗಂಟೆಯ ಒಳಗೆ ಮತ್ತೆ ಕೇಜ್ರಿವಾಲ್‌ರನ್ನು ಕೋರ್ಟ್‌ ಮುಂದೆ ಹಾಜರು ಪಡಿಸುವಂತೆ ಸೂಚಿಸಿದ್ದಾರೆ.

ನಾನು, ಮನೀಷ್‌ ನಿರಪರಾಧಿಗಳು: ಪ್ರಸ್ತುತ ಪ್ರಕರಣದಲ್ಲಿ ಮಾಜಿ ಡಿಸಿಎಂ ಮನೀಷ್‌ ಸಿಸೋಡಿಯಾ ಅವರೇ ತಪ್ಪಿತಸ್ಥರೆಂದು ನಾನು ಹೇಳಿಕೆ ನೀಡಿರುವುದಾಗಿ ಕೆಲವು ಮಾಧ್ಯಮ ವರದಿ ಮಾಡಿವೆ. ಆದರೆ ಅಂಥ ಯಾವ ಹೇಳಿಕೆಯನ್ನೂ ನಾನು ನೀಡಿಲ್ಲ. ನಾನು, ಸಿಸೋಡಿಯಾ, ಆಪ್‌ ನಿರಪರಾಧಿಗಳು ಎಂದು ಕೇಜ್ರಿವಾಲ್‌ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular