ಕಲಬುರಗಿ: ಕ್ರೆಡಿಟ್ ಕಾರ್ಡ್ನ ರಿವಾರ್ಡ್ ಪಾಯಿಂಟ್ ಆಸೆಗೆ ಬಲಿಯಾದ ದಂಪತಿ ₹7.85 ಲಕ್ಷ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
ಜಗತ್ ವೃತ್ತದ ಖಾಸಗಿ ಬ್ಯಾಂಕ್ವೊಂದರ ಗ್ರಾಹಕರಾದ ಮಂಜುನಾಥ ಶಂಕ್ರೆಪ್ಪ ಹಾದಿಮನಿ ದಂಪತಿ ಮೋಸದ ಜಾಲಕ್ಕೆ ಸಿಲುಕಿ, ಕ್ರೆಡಿಟ್ ಕಾರ್ಡ್ನಿಂದ ₹7.85 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ(ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಶಕ್ತಿ ಕಾಲೊನಿ ನಿವಾಸಿ ಮಂಜುನಾಥ ಶಂಕ್ರೆಪ್ಪ ಹಾದಿಮನಿ ಅವರು ಪತ್ನಿ ಹೆಸರಿನಲ್ಲಿ ₹10.88 ಲಕ್ಷ ವರೆಗಿನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ವಂಚಿತರು ಜುಲೈ 23ರಂದು ₹5,999 ರಿವಾರ್ಡ್ ಬಂದಿದೆ ಎಂದು ಮೆಸೇಜ್ ಮೂಲಕ ಲಿಂಕ್ ಕಳುಹಿಸಿದ್ದಾರೆ. ಅದನ್ನು ನಂಬಿದ ದಂಪತಿ ಲಿಂಕ್ಗೆ ಹೋಗಿ, ಅಲ್ಲಿ ಕೇಳಿರುವ ಎಲ್ಲ ಮಾಹಿತಿ ತುಂಬಿದ್ದಾರೆ. ಅದೇ ದಿನ ಸಂಜೆ ವೇಳೆ ₹1.79 ಲಕ್ಷ, ₹1.78 ಲಕ್ಷ, ₹75 ಸಾವಿರ, ₹1.80 ಲಕ್ಷ, ₹1.85 ಲಕ್ಷ ಸೇರಿ ಒಟ್ಟು ₹7.85 ಲಕ್ಷ ಕಡಿತ ಮಾಡಿಕೊಂಡಿದ್ದಾರೆ. ಅನುಮಾನದಿಂದ ಬ್ಯಾಂಕ್ಗೆ ತೆರಳಿ, ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ತಿಳಿಸಿದ್ದಾರೆ. ವಿಚಾರಣೆಯ ಬಳಿಕ ಮೋಸ ಹೋಗಿದ್ದು ಗತ್ತಾಗಿದೆ. ಬಳಿಕ ‘ಸೆನ್’ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.