Friday, April 18, 2025
Google search engine

Homeರಾಜ್ಯದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಡೇಂಜರಸ್ ಕಿರುಸೇತುವೆ: ಬ್ಯಾನರ್ ಅಳವಡಿಸಿ ಕೈ ತೊಳೆದುಕೊಂಡ ಅಧಿಕಾರಿಗಳು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಡೇಂಜರಸ್ ಕಿರುಸೇತುವೆ: ಬ್ಯಾನರ್ ಅಳವಡಿಸಿ ಕೈ ತೊಳೆದುಕೊಂಡ ಅಧಿಕಾರಿಗಳು

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲೊಂದು ಡೇಂಜರಸ್ ಕಿರುಸೇತುವೆ ಇರೋದು ಬಯಲಾಗಿದೆ. ಬೆಳ್ತಂಗಡಿ-ಮೂಡಬಿದಿರೆ  ಸಂಪರ್ಕಿಸುವ ಸೇತುವೆ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಗುರುತಿಸಲ್ಪಟ್ಟಿದೆ.

ಕಳೆದ ಮಳೆಗಾಲದಲ್ಲೇ ಕುಸಿದಿದ್ದ ಸೇತುವೆಗೆ ಕಾಯಕಲ್ಪ ಒದಗಿಸದೆ ನಿರ್ಲಕ್ಷ್ಯ ತೋರಿಸಿದ್ದರಿಂದ ಈ ಸೇತುವೆ ಕುಸಿತಗೊಂಡಿದೆ. ವಿಪರ್ಯಾಸವೆಂದರೆ ತಡೆಗೋಡೆ ಕುಸಿದು ವರ್ಷ ಕಳೆದರೂ ಪಂಚಾಯತ್ ಏನೂ ಕ್ರಮ ಕೈಗೊಂಡಿಲ್ಲ. ಕಳೆದ ಬಾರಿ ಎಚ್ಚರಿಕೆಯ ಬ್ಯಾನರ್ ಆಳವಡಿಸಿ ಪಂಚಾಯತ್ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.

ಹೀಗಾಗಿ ಈ ಮಳೆಗಾಲದಲ್ಲೂ ಆತಂಕ ಮುಂದುವರೆದಿದ್ದು, ಸೇತುವೆಯಲ್ಲಿ ಬಿರುಕುಗೊಂಡಿದೆ. ದಿನನಿತ್ಯ ಶಾಲಾ ವಾಹನಗಳು ಈ ಸೇತುವೆಯಲ್ಲಿ ಸಂಚರಿಸುತ್ತೆ. ಸದ್ಯ ತಗಡು ಶೀಟ್ ಅಳವಡಿಸಿರುವ ಮರೋಡಿ ಗ್ರಾಮ ಪಂಚಾಯತ್  ಘನ ವಾಹನ ಸಂಚಾರ ನಿಷೇಧ ಎಂದು ಸಣ್ಣ ಬ್ಯಾನರ್ ಆಳವಡಿಸಿ ಕೈ ತೊಳೆದುಕೊಂಡಿದೆ.

RELATED ARTICLES
- Advertisment -
Google search engine

Most Popular