Friday, April 11, 2025
Google search engine

Homeರಾಜ್ಯಜಿಲ್ಲಾಧಿಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಮೊಬೈಲ್ ಬೆಳಕಲ್ಲಿ ಕೋರ್ಟ್ ಕಲಾಪ ನಡೆಸಿದ ಉಪವಿಭಾಗಾಧಿಕಾರಿ

ಜಿಲ್ಲಾಧಿಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಮೊಬೈಲ್ ಬೆಳಕಲ್ಲಿ ಕೋರ್ಟ್ ಕಲಾಪ ನಡೆಸಿದ ಉಪವಿಭಾಗಾಧಿಕಾರಿ

ತುಮಕೂರು: ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಕತ್ತಲೆ ಭಾಗ್ಯ ಲಭಿಸಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಕಲಾಪ ನಡೆಯುವಾಗ ವಿದ್ಯುತ್ ಕೈಕೊಟ್ಟರೆ ಮೊಬೈಲ್ ಟಾರ್ಚ್‌ ನ ಬೆಳಕೇ ಆಸರೆಯಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಸುಣ್ಣ-ಬಣ್ಣ ಬಳಿದುಕೊಂಡು ಹೊರಗೆ ರಂಗು ರಂಗಾಗಿ ಮಿಂಚುತ್ತಿದ್ದರೆ, ವಿದ್ಯುತ್‌ ನ ಕಣ್ಣಾಮುಚ್ಚಾಲೆಯಲ್ಲೇ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು.

ವಿದ್ಯುತ್ ಕೈ ಕೊಟ್ಟಾಗ ಬದಲಿ ವ್ಯವಸ್ಥೆಯಾಗಿ ಚಾಲ್ತಿಗೆ ಬಂದದ್ದು ಮೊಬೈಲ್ ಟಾರ್ಚ್ ಬೆಳಕು. ಟಾರ್ಚ್ ಬೆಳಕಲ್ಲೇ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ವಕೀಲರ ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದ ದೃಶ್ಯ ಜಿಲ್ಲಾಡಳಿತದ ವೈಪಲ್ಯಕ್ಕೆ ಹಿಡಿದ ಕನ್ನಡಿಯಂತಿತ್ತು.

ಜಿಲ್ಲಾಡಳಿತಕ್ಕೆ ಯುಪಿಎಸ್ ಹಾಗೂ ಜನರೇಟರ್ ಕೊಳ್ಳಲು ಸಾಧ್ಯವಾಗದಷ್ಟು ಅಸಹಾಯಕವಾಯಿತೇ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular