ಹೊಸದಿಲ್ಲಿ : ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ನ್ನು ಮಂಡಿಸುತ್ತಿದ್ದು, ದೇಶದ ಮಧ್ಯಮವರ್ಗಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ.
ವೇತನ ತೆರಿಗೆ ವಿನಾಯ್ತಿಯನ್ನು 12 ಲಕ್ಷಕ್ಕೆ ಏರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ತೆರಿಗೆ ವಿನಾಯ್ತಿಯು 7 ಲಕ್ಷ ರೂ. ಇತ್ತು. “ಆದರೆ ಇದು ಕೇವಲ ವೇತನ ಮೇಲಿನ ತೆರಿಗೆಯಾಗಿದ್ದು, ಹೂಡಿಕೆ ಮೇಲಿನ ತೆರಿಗೆಗೆ ಇದು ಅನ್ವಯಿಸುವುದಿಲ್ಲ..” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.