Thursday, April 17, 2025
Google search engine

Homeರಾಜ್ಯಸುದ್ದಿಜಾಲರೈತನ ಜಮೀನಿಗೆ ಪರಿಹಾರ ನೀಡಲು ವಿಳಂಬ: ಪಾಂಡವಪುರ ಉಪ ವಿಭಾಗಾಧಿಕಾರಿ ಕಚೇರಿ ಚರಾಸ್ತಿ ಜಪ್ತಿ

ರೈತನ ಜಮೀನಿಗೆ ಪರಿಹಾರ ನೀಡಲು ವಿಳಂಬ: ಪಾಂಡವಪುರ ಉಪ ವಿಭಾಗಾಧಿಕಾರಿ ಕಚೇರಿ ಚರಾಸ್ತಿ ಜಪ್ತಿ

ಮಂಡ್ಯ: ರೈತನ ಜಮೀನಿಗೆ ಪರಿಹಾರ ಒದಗಿಸಲು ವಿಫಲವಾದ ಹಿನ್ನಲೆ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಪಾಂಡವಪುರ ಉಪ ವಿಭಾಗಾಧಿಕಾರಿ ಕಚೇರಿ ಚರಾಸ್ತಿ ಜಪ್ತಿಗೆ ಆದೇಶ ನೀಡಿದೆ.

ಈ ಹಿನ್ನಲೆ ರೈತರ ಸಹಕಾರದೊಂದಿಗೆ ಎಸಿ ಕಚೇರಿಗೆ ಆಗಮಿಸಿದ ಕೋರ್ಟ್ ಅಮೀನರು ನ್ಯಾಯಾಲಯದ ಆದೇಶವನ್ನು ಜಾರಿ ಮಾಡಿದ್ದಾರೆ.

2006 ರಲ್ಲಿ ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ತ್ಯಾಜ್ಯ ಘಟಕಕ್ಕಾಗಿ ರೈತ ಸತ್ಯನಾರಾಯಣ ಅವರ  ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಆ ವೇಳೆ ರೈತನಿಗೆ ಕಡಿಮೆ ಮೊತ್ತದ ಪರಿಹಾರ ನೀಡಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇದರಿಂದ ಹತಾಶೆಗೊಂಡ ರೈತ ಹೆಚ್ಚಿನ ಪರಿಹಾರಕ್ಕೆ ಕೋರ್ಟ್ ಗೆ ಮೊರೆ ಹೋಗಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ ಸಿ ಕೋರ್ಟ್ 4.89 ಕೋಟಿ ಪರಿಹಾರ ನೀಡಲು ಸೂಚನೆ ನೀಡಿತ್ತು. ಆದೇಶ ನೀಡಿ 2 ವರ್ಷ ಕಳೆದರೂ ಪರಿಹಾರ ಕೊಡದೆ ವಿಳಂಬ ಮಾಡಿದ್ದರಿಂದ ಕೋರ್ಟ್ ನಲ್ಲಿ ರೈತನಿಗೆ ಎಸಿ ಕಚೇರಿ ಸ್ತಿರಾಸ್ತಿ ಜಪ್ತಿ ಮಾಡಿಕೊಡುವಂತೆ ಆದೇಶ ನೀಡಲಾಗಿತ್ತು.

ನ್ಯಾಯಾಲಯದ ಆದೇಶದ ಮೇರೆಗೆ ರೈತರ ಮುಂದೆ ಎಸಿ ಕಚೇರಿ ಪೀಠೋಪಕರಣ ಜಪ್ತಿಗೆ ಮುಂದಾಗುತ್ತಿದ್ದಂತೆ ಎಸಿ ಸ್ಥಳಕ್ಕೆ ಆಗಮಿಸಿದ್ದು, ರೈತರ ಮನವೊಲಿಸಿ ಶೀಘ್ರ ಪರಿಹಾರದ ಮೊತ್ತ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಧಿಕಾರಿಯ ಭರವಸೆ ಮೇರೆಗೆ ರೈತರು ಪೀಠೋಪಕರಣ ಹಿಂತಿರುಗಿಸಿದ್ದಾರೆ.

RELATED ARTICLES
- Advertisment -
Google search engine

Most Popular