Friday, April 18, 2025
Google search engine

Homeರಾಜಕೀಯಸದನದಲ್ಲಿ ಅಗೌರವ ಹಾಗೂ ಅಶಿಸ್ತು ಪ್ರದರ್ಶನ: ಬಿಜೆಪಿಯ 10 ಶಾಸಕರು ಅಮಾನತು!

ಸದನದಲ್ಲಿ ಅಗೌರವ ಹಾಗೂ ಅಶಿಸ್ತು ಪ್ರದರ್ಶನ: ಬಿಜೆಪಿಯ 10 ಶಾಸಕರು ಅಮಾನತು!

ಬೆಂಗಳೂರು: ಸದನದಲ್ಲಿ ಅಗೌರವ ಹಾಗೂ ಅಶಿಸ್ತಿನಿಂದ ನಡೆದುಕೊಂಡ ಹಿನ್ನಲೆ ಹತ್ತು ಮಂದಿ ಬಿಜೆಪಿ ಸದಸ್ಯರನ್ನ ಅಮಾನತು ಮಾಡಲಾಗಿದೆ ಎಂದು ಸ್ವೀಕರ್‌ ಯು ಟಿ ಖಾದರ್‌ ಆದೇಶವನ್ನ ಹೊರಡಿಸಿದ್ದಾರೆ. ಡೆಪ್ಯೂಟಿ‌ ಸ್ಪೀಕರ್ ರುದ್ರಪ್ಪ ಲಮಾಣಿ‌ ಮೇಲೆ ವಿಧೇಯಕದ ಕಾಪಿಗಳನ್ನ ಹರಿದು ಬಿಜೆಪಿ ಶಾಸಕರು ಎಸೆದಿದ್ದು, ಸದನಕ್ಕೆ ಅಗೌರದಿಂದ ನಡೆದುಕೊಳ್ಳಲಾಗಿದೆ ಎಂದು ಸ್ವೀಕರ್‌ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ಸದಸ್ಯರಾದ ಆರ್ ಅಶೋಕ್, ಅಶ್ವಥ್‌ ನಾರಾಯಣ, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್, ಯಶಪಾಸ್ ಸುವರ್ಣ, ಧೀರಜ್ ಮುನಿರಾಜ್, ಅರಗ ಜ್ಞಾನೇಂದ್ರ, ಭರತ್ ವೈ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದರು ಹಾಗೂ ಸದಸ್ಯರನ್ನು ಸದನದಿಂದ‌ ಹೊರಗೆ ಹೋಗುವಂತೆ ಸೂಚಿಸಿದರು.

RELATED ARTICLES
- Advertisment -
Google search engine

Most Popular