ರಾಮನಗರ: ಪಶುಸಂಗೋಪನೆ, ರೇಷ್ಮೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ನಾಳೆ ಸೆ. ೧೦ರ ಮಂಗಳವಾರ ರಾಮನಗರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಅವರು ನಾಳೆ ಸೆ. ೧೦ರ ಮಂಗಳವಾರ ವ್ಮಧ್ಯಾಹ್ನ ೧ ಗಂಟೆಗೆ ಮೈಸೂರಿನಿಂದ ನಿರ್ಗಮಿಸಿ, ರಸ್ತೆ ಮೂಲಕ ಮಧ್ಯಾಹ್ನ ೩ ಗಂಟೆಗೆ ರಾಮನಗರಕ್ಕೆ ಆಗಮಿಸುವರು ನಂತರ ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಭೇಟಿ ಹಾಗೂ ರಾಮನಗರ ಜಿಲ್ಲೆಯ ರೇಷ್ಮೆ ಬೆಳೆಯ ಕುರಿತು ಶಾಸಕರು, ಅಧಿಕಾರಿಗಳು, ರೈತರು ಮತ್ತು ರೀರ?ಸ್ಗಳೊಂದಿಗೆ ಚರ್ಚೆ ನಡೆಸುವರು.
ತದನಂತರ ಸಚಿಜೆ ೬ ಗಂಟೆಗೆ ರಾಮನಗರ ದಿಂದ ನಿರ್ಗಮಿಸಿ ರಾತ್ರಿ ೭ ಗಂಟೆಗೆ ಬೆಂಗಳೂರು ತಲುಪುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.