Thursday, August 28, 2025
Google search engine

Homeಅಪರಾಧಮಗಳ ಮನೆಗೆ ಹೋಗಲು ಸಿಗದ ರಜೆ ಮನನೊಂದು ಬಸ್ ನಲ್ಲೇ ನೇಣಿಗೆ ಶರಣಾದ ಚಾಲಕ

ಮಗಳ ಮನೆಗೆ ಹೋಗಲು ಸಿಗದ ರಜೆ ಮನನೊಂದು ಬಸ್ ನಲ್ಲೇ ನೇಣಿಗೆ ಶರಣಾದ ಚಾಲಕ

ಬೀದರ್ : ರಜೆ ಕೊಡದಿದ್ದಕ್ಕೆ ಬಸ್ ನಲ್ಲೇ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ಬಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ.

ಡಿಪೋ ನಂಬರ್ 1ರಲ್ಲಿ ಬಸ್ನಲ್ಲಿಯೇ ನೇಣು ಬಿಗಿದುಕೊಂಡು ಡ್ರೈವರ್ ರಾಜು ಅಣದೂರು (55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಮನೆಗೆ ಹೋಗಬೇಕು ಎಂದು ಡಿಪೋ ಮ್ಯಾನೇಜರ್ ಬಳಿ ರಜೆ ಕೇಳಿದ್ದಾರೆ. ರಜೆ ಕೊಡಲು ಆಗಲ್ಲ, ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಿ, ರಜೆ ಹಾಕಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ.

ಮನನೊಂದ ರಾಜಪ್ಪ ರಾತ್ರಿ ಡ್ಯೂಟಿ ಮುಗಿಸಿ ಬಸ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಾಜಪ್ಪ ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಡಿಪೋ ಅಧಿಕಾರಿಗಳ ವಿರುದ್ಧ ರಾಜು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

RELATED ARTICLES
- Advertisment -
Google search engine

Most Popular