ಹನೂರು: ತಾಲ್ಲೂಕಿನ ಗಡಿ ಭಾಗವಾದ ನಾಲ್ ರೋಡ್ ಸಮೀಪದ ತಿರುವು ಒಂದರಲ್ಲಿ ತಮಿಳುನಾಡಿಗೆ ಜೋಳ ತುಂಬಿಕೊಂಡು ಹೋಗುತ್ತಿದ್ದ ಕೊಳ್ಳೇಗಾಲದ ಜಾಗೇರಿಯ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಾಗೂ ಜೊತೆಯಲ್ಲಿ ಇದ್ದ ಸಹಾಯಕನಿಗೂ ಕಾಲು ಕೂಡ ಮುರಿತಗೊಂಡಿದೆ. ಅಪಘಾತದಲ್ಲಿ ಲಾರಿಯೂ ಸಂಪೂರ್ಣ ಜಖಂ ಗೊಂಡಿದ್ದು, ಜೋಳದ ಮೂಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಾಯಾಳು ಚಾಲಕನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.