ಚೆನ್ನೈ: ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಸೋಮವಾರ (ಜೂನ್ 23) ಬಂಧಿಸಿದ ತಮಿಳು ನಟ ಶ್ರೀಕಾಂತ್ ಅಲಿಯಾಸ್ ಶ್ರೀರಾಮ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನಟನಿಗೆ ಮಾದಕ ದ್ರವ್ಯಗಳನ್ನು ಪೂರೈಸುತ್ತಿರುವ ಶಂಕಿತ ಎಐಎಡಿಎಂಕೆ ಐಟಿ ವಿಭಾಗದ ಸದಸ್ಯ ಟಿ ಪ್ರಸಾದ್ ಅವರನ್ನು ಬಂಧಿಸಿದ ನಂತರ ಶ್ರೀಕಾಂತ್ ಬಂಧನವಾಗಿದೆ. ಶ್ರೀಕಾಂತ್ ಅವರನ್ನು ಸೋಮವಾರ ಎಗ್ಮೋರ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು ಅವರನ್ನು ಜುಲೈ 7, 2025 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
46 ವರ್ಷದ ನಟನನ್ನು ಈ ಹಿಂದೆ ತನಿಖಾ ಪ್ರಕ್ರಿಯೆಯ ಭಾಗವಾಗಿ ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶ್ರೀಕಾಂತ್ ಅವರನ್ನು ಸೋಮವಾರ ಮಧ್ಯಾಹ್ನ ನುಂಗಂಬಕ್ಕಂ ಪೊಲೀಸ್ ಠಾಣೆಗೆ ಕರೆತರಲಾಯಿತು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು. ಈ ಅವಧಿಯಲ್ಲಿ, ರಕ್ತದ ಮಾದರಿ ಪರೀಕ್ಷಿಸಲಾಯಿತು, ಇದು ಅವರ ದೇಹದಲ್ಲಿ ಮಾದಕ ವಸ್ತುವಿನ ಉಪಸ್ಥಿತಿಯನ್ನು ದೃಢಪಡಿಸಿತು. ನಟನ ವಿರುದ್ಧ 12,000 ರೂ. ಮೌಲ್ಯದ ಕೊಕೇನ್ ಖರೀದಿಸಿದ ಆರೋಪವಿದೆ.
ನುಂಗಂಬಾಕ್ಕಂನ ಖಾಸಗಿ ಬಾರ್ನಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಐಟಿ ವಿಭಾಗದ ಸದಸ್ಯ ಪ್ರಸಾದ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಶ್ರೀಕಾಂತ್ಗೆ ಕೊಕೇನ್ ಸೇರಿದಂತೆ ನಿಷೇಧಿತ ಮಾದಕ ದ್ರವ್ಯಗಳನ್ನು ಪೂರೈಸಿದ್ದಾರೆ ಎಂದು ಆರೋಪಿಸಲಾಗಿದೆ.
“ತೀಕಿರೈ” ಚಿತ್ರಕ್ಕೆ ಸಂಬಂಧಿಸಿದ ಪಾರ್ಟಿಯ ಸಂದರ್ಭದಲ್ಲಿ ನಟ ಶ್ರೀಕಾಂತ್, ಪ್ರಸಾದ್ ಅವರಿಂದ ಕೊಕೇನ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರಕ್ಕೆ ಪ್ರಸಾದ್ ಸಹ-ನಿರ್ಮಾಪಕ. ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
SUMMARY: