Friday, April 11, 2025
Google search engine

Homeರಾಜ್ಯಸುದ್ದಿಜಾಲದಸರಾ ಒಂದು ನಾಡಹಬ್ಬ ಹಾಗೂ ಸ್ವರ್ಗವನ್ನು ಕಾಣುವ ಒಂದು ಸಮಯ: ಸುರೇಶ್ ಎನ್ ಋಗ್ವೇದಿ

ದಸರಾ ಒಂದು ನಾಡಹಬ್ಬ ಹಾಗೂ ಸ್ವರ್ಗವನ್ನು ಕಾಣುವ ಒಂದು ಸಮಯ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ದಸರಾ ಹಬ್ಬ ನಾಡಿನ ಹಬ್ಬವಾಗಿದ್ದು, ಸ್ವರ್ಗ ಸುಖವನ್ನು ಮೈಸೂರು ಮತ್ತು ಚಾಮರಾಜನಗರದಲ್ಲಿ ಕಾಣಬಹುದಾಗಿದೆ. ಮನೆ ಮನೆಗಳಲ್ಲೂ ದಸರಾದ ಆಚರಣೆ ನಡೆಯುತ್ತಿದೆ ಸಾರ್ವಜನಿಕವಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಇಡೀ ನಗರವನ್ನು ಸುಂದರಗೊಳಿಸಿದ್ದು ದೀಪಾಲಂಕಾರ ಸಾಂಸ್ಕೃತಿಕ ಕಾರ್ಯಕ್ರಮ ,ದೇವತಾ ಕಾರ್ಯಕ್ರಮ, ಹಾಗೂ ಮೊಟ್ಟಮೊದಲಿಗೆ ಖಾಸಗಿ ದರ್ಬಾರ್ ಪುನರುಸ್ತಾನಗೊಳಿಸಿರುವ ಸರ್ಕಾರಕ್ಕೆ ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜನತೆ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು .

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಮತ್ತು ಮೈಸೂರು ಒಡೆಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ದಸರಾ ಮಹೋತ್ಸವ ತದನಂತರ ಒಡೆಯರ್ ಸಂಸ್ಥಾನದ ಮೈಸೂರಿನಲ್ಲಿ ಆರಂಭಿಸಿ ನಾಡಿನ ಸಂಸ್ಕೃತಿ ,ಪರಂಪರೆ, ಕಲೆ, ಸಾಹಿತ್ಯ ವಾಸ್ತುಶಿಲ್ಪ ,ಅಭಿವೃದ್ಧಿ ,ನೀರಾವರಿ ,ಪ್ರಕೃತಿ ಮತ್ತು ಆಧ್ಯಾತ್ಮಿಕ ಶಕ್ತಿ ಅಲ್ಲದೆ ಎಲ್ಲ ಸಮಗ್ರ ಕ್ಷೇತ್ರಗಳ ವಿಕಾಸದ ಪ್ರಗತಿಯನ್ನು ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯಕ್ರಮವಾಗಿ ರೂಪಿತವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು _ ಚಾಮರಾಜನಗರ ಅವಿನಾಭಾವದ ಭಾವನಾತ್ಮಕ ಸಂಬಂಧವನ್ನು ಹೊಂದಿದೆ.

ಮೈಸೂರಿನ ಭಾಗವಾಗಿದ್ದ ಚಾಮರಾಜನಗರ ತನ್ನದೇ ಆದ ಜಿಲ್ಲೆಯ ಸ್ವರೂಪವನ್ನು ಪಡೆದ ನಂತರ ಚಾಮರಾಜನಗರದಲ್ಲು ಸರ್ಕಾರ ವಿಶೇಷವಾಗಿ ದಸರಾವನ್ನು ಆಚರಿಸುವ ಮೂಲಕ ಕ್ಷೇತ್ರದ ಸಮಗ್ರವಾದ ಅಭಿವೃದ್ಧಿಗೆ ಮತ್ತು ಸಾಂಸ್ಕೃತಿಕ ,ಅಧ್ಯಾತ್ಮಿಕ ಮೌಲ್ಯಗಳನ್ನು ಸಮರ್ಪಿಸುವ ಮತ್ತು ಜನತೆಯನ್ನು ಸಾಂಸ್ಕೃತಿಕ ಲೋಕಕ್ಕೆ ತೆಗೆದುಕೊಂಡು ಹೋಗುವ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿದೆ .ಇದಕ್ಕಾಗಿ ಜನತೆ ಧನ್ಯವಾದಗಳು ಅರ್ಪಿಸಬೇಕಾಗಿದೆ. ಮೈಸೂರು ಒಡೆಯರ ಕೊಡುಗೆ ಅಪಾರವಾದದ್ದು .ಕಲೆಯ ಸಾಹಿತ್ಯ ,ಸಂಗೀತ ,ನೃತ್ಯ ಮತ್ತು ವಿವಿಧ ಲಲಿತ ಕಲೆಗಳ ವಿಕಾಸಕ್ಕಾಗಿ ಮೈಸೂರು ಒಡೆಯರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ದಸರಾ ಒಂದು ನಾಡಹಬ್ಬ ಹಾಗೂ ಸ್ವರ್ಗವನ್ನು ಕಾಣುವ ಒಂದು ಸಮಯ ಎಂದು ಬಣ್ಣಿಸಿದರು.

ಚಾಮರಾಜನಗರ ಮೈಸೂರು ದಸರಾದಲ್ಲಿ ವಿಶೇಷವಾಗಿ ಕುಸ್ತಿ ಹಾಗೂ ಸಾಂಸ್ಕೃತಿಕ ನೃತ್ಯ ಪರಂಪರೆಗಳ ಅವಿನಾಭಾವದ ಸಂಕೇತವಾಗಿ ಇಂದಿಗೂ ಭಾಗವಹಿಸುತ್ತಿರುವುದು ನಗರಕ್ಕೆ ಬಹು ಗೌರವವನ್ನು ತಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ದಸರಾ ವೈಭವವನ್ನು ಚಿಂತಿಸುವ ಮತ್ತು ಶ್ರಮಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುವ ಕಾರ್ಯ ಮಾಡಬೇಕು ಎಂದು ಋಗ್ವೇದಿ ತಿಳಿಸಿದರು.

ಉದ್ಘಾಟನೆಯನ್ನು ನೆರವೇರಿಸಿದ ಅಖಿಲ ಕರ್ನಾಟಕ ಕನ್ನಡ ಮಹಾಸವಾದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ಸರ್ಕಾರ ಇತಿಹಾಸ ,ಪರಂಪರೆಗೆ ಗೌರವ ತರುವ ಕಾರ್ಯವನ್ನು ಮಾಡುತ್ತಿದೆ. ದಸರಾ ಹಬ್ಬದ ವಿಶೇಷಗಳನ್ನು ಸಮುದಾಯಕ್ಕೆ ತಿಳಿಸಿ ಮತ್ತೊಮ್ಮೆ ಹಳೆಯ ಪದ್ಧತಿಗಳನ್ನು ವಿಸ್ತಾರಗೊಳಿಸಿ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪುನರು ಸ್ಥಾನಗೊಳಿಸುವ ಅವಶ್ಯಕತೆ ಇದೆ. ಚಾಮರಾಜನಗರದ ನಿರ್ಮಾಣವೇ ಮೈಸೂರು ಒಡೆಯರ ಕೊಡುಗೆ. ಚಾಮರಾಜೇಶ್ವರ ಸ್ವಾಮಿ ದೇವಾಲಯದ ನಿರ್ಮಾಣ, ಖಾಸಗಿ ಜನನ ಮಂಟಪದಲ್ಲಿ ಮತ್ತೆ ದಸರಾ ದರ್ಬಾರ್ ಆರಂಭಿಸಿರುವ ಜಿಲ್ಲಾಡಳಿತಕ್ಕೆ ಸರ್ವರು ಸಹಕಾರವನ್ನು ನೀಡಬೇಕು . ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿಯವರು ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸಿ ದಸರಾ ಹಬ್ಬದ ಬಗ್ಗೆ ತಿಳಿಯುವ ಹಾಗು ನಿರಂತರವಾಗಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯವೆಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಮಂಜುನಾಥ ಆರಾಧ್ಯ ಮಾತನಾಡಿ ತಾಯಿ ಚಾಮುಂಡಿ ಮಹಿಷಾಸುರನನ್ನು ಸಂಹರಿಸಿದ ನೆನಪಿಗಾಗಿ ಹಳೆ ಮೈಸೂರಿನಲ್ಲಿ ವಿಶೇಷವಾಗಿ ದಸರಾ ಹಬ್ಬ ಪರಂಪರೆಯಿಂದ ನಡೆದು ಬಂದಿದೆ ಉತ್ತರ ಭಾರತದಲ್ಲಿ ರಾವಣನನ್ನು ಕೊಂದ ರಾಮನನ್ನು ವಿಶೇಷವಾಗಿ ಪೂಜಿಸುವ ರಾವಣ ದಹನ ಮಾಡುವ ಮೂಲಕ ದಸರಾ ಹಬ್ಬ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ ಶಿವಲಿಂಗ ಮೂರ್ತಿ ,ಪರಶಿವ ಶೆಟ್ಟಿ, ಪರಮೇಶ್ವರಪ್ಪ, ವೆಂಕಟೇಶ್ ಬಾಬು, ಪಣ್ಯದ ಹುಂಡಿ ರಾಜು ಮಹಾದೇವ, ಕಾರ್ತಿಕ್ ,ಮಹೇಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular