ಮಂಡ್ಯ: ನಮ್ಮ ನಾಡಿನ ಸಂಸ್ಕ್ರತಿ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಕಲ್ಲು-ಶಿಲೆಯ ಮೇಲೆ ಕೆತ್ತನೆ ಮಾಡಿ ನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸಿರುವುದು. ಕಲ್ಲು /ಶಿಲೆಗಳ ಮೇಲೆ ಕೆತ್ತನೆಯ ಮೂಲಕ ಸಂಸ್ಕ್ರತಿ ಮತ್ತು ಇತಿಹಾಸವನ್ನ ಜೀವಂತವಾಗಿಟ್ಟಿರುವ ಅಮರ ಶಿಲ್ಫಿ ಜಕ್ಕಣಾಚಾರಿಯವರ ಸಾಧನೆ, ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾಧಿಕಾರಿ ಡಾ. ಕುಮಾರರವರು ತಿಳಿಸಿದರು.
ಅವರು ಇಂದು ಮಂಡ್ಯ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ಮಂಡ್ಯ ಹಾಗೂ ವಿಶ್ವಕರ್ಮ ಸಮಾಜ, ಮಂಡ್ಯ ಇವರ ಸಹಯೋಗದೊಂದಿಗೆ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅಂಗವಾಗಿ ಅವರು ಉದ್ಘಾಟಿಸಿ ಮಾತನಾಡಿದರು. ಸಾಧನೆಗೆ ಸಾವಿಲ್ಲ ಜಕಣಾಚಾರಿ ಕೊಟ್ಟಿರುವಂತವ ಕೊಡುಗೆ, ಸಾಧನೆಗೆ ಸಾವಿಲ್ಲ ಅದು ಸೂರ್ಯ – ಚಂದ್ರ ಇರುವವರೆಗೂ ಜೀವಂತವಾಗಿರುತ್ತದೆ ಎಂದರು.
ನಾವೆಲ್ಲರೂ ಕೂಡ ಜಕಣಾಚಾರಿಯವರ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಮಕ್ಕಳಿಗೂ ತಿಳಿಸಬೇಕು. ಸಾಹಿತ್ಯ, ಕಲೆ, ಸಂಸ್ಕ್ರತಿ, ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು. ಅವರ ಚಿಂತನೆ, ಆದರ್ಶ, ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಕೇವಲ ಅವರನ್ನು ನೆನಪಿಸಿಕೊಳ್ಳದೆ ಅವರಿಗೆ ನಮಿಸಬೇಕು ಎಂದರು. ಪುಸ್ತಕ ನೋಡಿ ಜಕಣಾಚಾರಿಯವರ ಸಾಧನೆಯನ್ನು ತಿಳಿದುಕೊಳ್ಳುವುದಕ್ಕಿಂತ, ಅವರ ಸಾಧನೆ ಹಾಗೂ ಕೊಡುಗೆಗಳನ್ನು ಕಣ್ಣಾರೆ ನೋಡಿದರೆ ನಮಗೆ ಹೆಮ್ಮೆ ಉಂಟಾಗುತ್ತದೆ ಎಂದರು.
ಬೇಲೂರು ಮತ್ತು ಹಳೆಬೀಡು ವಿಶ್ವಪರಂಪರೆ ಸಾಧನೆಯ ಪಟ್ಟಿಯಲ್ಲಿದೆ ಇದಕ್ಕೆ ಕಾರಣ ಶಿಲೆಗಳ ಮೇಲಿರುವ ಇತಿಹಾಸ. ಅವುಗಳನ್ನು ಒಮ್ಮೆಯಾದರು ನೋಡಿ ಎಂದು ಕರೆ ಕೊಟ್ಟರು. ಜೀವವಿಲ್ಲದ ಕಲ್ಲಿಗೆ ಜೀವವನ್ನು ತುಂಬಿ ಕೊಡುವ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ಜಕಣಾಚಾರಿಯಂತಹ ಮಹಾನ್ ಕಲೆಗಾರರನ್ನು ಅಂತರಗದಲ್ಲಿ ಪೂಜಿಸಿ, ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ ಎಚ್. ಎಲ್ ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್ ಉದಯಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹಾಗೂ ಶಿವಲಿಂಗಯ್ಯ, ವಿಶ್ವಕರ್ಮ ಸಮಾಜದ ವೇದಬ್ರಹ್ಮತಿಲಕೇಶ್ಮೂರ್ತಿ, ವಿಶ್ವಕರ್ಮ ಸಮಾಜದ ಮುಖಂಡರುಗಳಾದ ವೈ.ಡಿ ಶ್ರೀನಿವಾಸ ಮೂರ್ತಿ, ಹೆಚ್.ಪಿ ಸತೀಶ್, ನಾಗರಾಜ ಆಚಾರ್, ಎಲ್. ಆನಂದ ಸುದರ್ಶನ್, ಎಂ.ಬಿ ರಮೇಶ್, ದೇವರಾಜು ಇನ್ನಿತರಿದ್ದರು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು.
