ಬೆಳಗಾವಿ: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರನ್ನು ನಂಬುವವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ವಾದಿಸಿದ್ದಾರೆ. ನಮ್ಮ ಸಮಾಜದಲ್ಲಿ ಇಂದು ಸಾಕ್ಷರತಾ ಪ್ರಮಾಣ ಹೆಚ್ಚಾಗಿದೆ, ಆದರೆ ಜಾತಿ ಹೋಗಿಲ್ಲ ಎಂದರು.
ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳನ್ನು ಅನೇಕ ಜನರು ತಮ್ಮ ಬಡತನ ಅಥವಾ ಶಿಕ್ಷಣದ ಕೊರತೆಗೆ ದೂಷಿಸುತ್ತಾರೆ. ಅಲ್ಲದೆ ಅದನ್ನು ವಿಧಿ ಮತ್ತು ಕರ್ಮಸಿದ್ಧಾಂತ ಎಂದು ಹೇಳುತ್ತಾರೆ. ಇದನ್ನು ತಿರಸ್ಕರಿಸಿದವರು ಬಸವಣ್ಣ ಎಂದು ಉತ್ತರ ಕರ್ನಾಟಕದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಹೇಳಿದರು.
ಈ ಗುಲಾಮಗಿರಿಯ ಮನಸ್ಥಿತಿ ಜಾತಿ ವ್ಯವಸ್ಥೆಯನ್ನು ಬಲಪಡಿಸುತ್ತದೆ ಹಾಗೂ ಜಾತಿ ಹೋಗದ ಹೊರತು ಸಮಾನತೆ ಇರುವುದಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಮಹತ್ವಾಕಾಂಕ್ಷೆಯನ್ನು ವಿಷಯ ಎತ್ತಿದರು. ನೀವು ಬ್ರಹ್ಮನೊಂದಿಗೆ ಕುಳಿತು ನಿಮ್ಮ ಹಣೆಬರಹವನ್ನು ಬರೆದಿದ್ದೀರಿ. ಯಾವ ಜಾತಿಯೂ ಸಹ ನಿಮ್ಮ ದಾರಿಗೆ ಅಡ್ಡ ಬರಲಿಲ್ಲ ಎಂದರು.
ನೀವು ದಾಖಲೆಗಳನ್ನು ಮುರಿಯುತ್ತಿದ್ದೀರಿ. ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಿ. ದೇವರಾಜ್ ಅರಸ್ ಅವರ ದಾಖಲೆಯನ್ನು ಮುರಿಯುವ ಅಂಚಿನಲ್ಲಿರುವ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿದರು. ಸಿದ್ದರಾಮಯ್ಯ ಅವರಿಗೆ ವಿಧಿಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು. ಇದ್ದಕ್ಕೆ ಪ್ರತಿಕ್ರಿಯಿಸಿದ ಸಿಎಮ ಸಿದ್ದರಾಮಯ್ಯ ಅವರು ನಾವು ಆರು ಮಕ್ಕಳು. ನಮ್ಮ ಪೋಷಕರು ಅವಿದ್ಯಾವಂತರು. ನನ್ನ ಅಣ್ಣ 4 ನೇ ತರಗತಿಯವರೆಗೆ ಓದಿದ್ದರು. ಇತರರು ಶಾಲೆಗೆ ಹೋಗಲಿಲ್ಲ. ನಾನು ಮಾತ್ರ ಕಾನೂನು ಓದುತ್ತೇನೆ ಎಂದು ಬ್ರಹ್ಮ ಬರೆದಿದ್ದಾರೆಯೇ ಎಂದು ಕೇಳಿದರು.
ಕೇವಲ 10 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಅವರು ಮುಖ್ಯಮಂತ್ರಿಯಾದರು ಎಂದು ಹೇಳಿದ ಬಿಜೆಪಿಯ ಸುರೇಶ್ ಗೌಡ ನೀವು ಕರ್ಮ ಸಿದ್ಧಾಂತವನ್ನು ಹೇಗೆ ನಂಬಲು ಸಾಧ್ಯವಿಲ್ಲ ಎಂದು ಕೇಳಿದರು.ಈ ವೇಳೆ ನೀವು ಬಸವಣ್ಣನನ್ನು ನಂಬುತ್ತೀರಾ ಎಂದು ಸಿದ್ದರಾಮಯ್ಯ ಕೇಳಿದರು. ನೀವು ಬಸವಣ್ಣನನ್ನು ನಂಬಿದರೆ, ನೀವು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಬೇಕು. ನೀವು ಎರಡನ್ನೂ ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.



