Sunday, April 20, 2025
Google search engine

Homeರಾಜ್ಯಸೇವಂತಿ ಹೂವಿನ ದರ ಕುಸಿತ: ಬೆಳೆ ನಾಶ ಪಡಿಸಿದ ರೈತ

ಸೇವಂತಿ ಹೂವಿನ ದರ ಕುಸಿತ: ಬೆಳೆ ನಾಶ ಪಡಿಸಿದ ರೈತ

ಮಂಡ್ಯ: ಸೇವಂತಿ ಹೂವಿನ‌ ದರ ಕುಸಿತ ಹಿನ್ನಲೆ ಬೆಳೆದ ಹೂವನ್ನು ರೈತ ಸ್ವತಃ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೇವಂತಿ ಹೂ ಬೆಳೆದು ರೈತನ ಬದುಕು ಬೀದಿಗೆ ಬಿದ್ದಿದ್ದು, ಪಾಂಡವಪುರ ಮತ್ತು ಕೆ.ಆರ್.ಪೇಟೆ ಭಾಗದಲ್ಲಿ ಸೇವಂತಿ ಹೂ ಕೃಷಿ ಮಾಡಿದ ರೈತ ಕುಟುಂಬ ಕಂಗಾಲಾಗಿದೆ.

ಸೇವಂತಿ ಹೂವಿನ‌ ದರ ಕುಸಿತ ಕಂಗಾಲಾಗಿ ಬೆಳೆದ ಹೂವಿನ ಬೆಳೆಯನ್ನು ನಾಶ ಪಡಿಸಲಾಗಿದೆ.

ಹೂ ಕೀಳಿಸಿದ ಕೂಲಿಯೂ ಸಿಗದ ಕಾರಣಕ್ಕೆ ರೈತರು ಹೂವಿನ ಬೆಳೆಯನ್ನು ನಾಶ ಮಾಡಿದ್ದಾರೆ.

ಮಳೆ ಇಲ್ಲದೆ ಇತ್ತ ಬೆಳೆದ ಬೆಳೆಗೆ ಬೆಲೆಯೂ ಇಲ್ಲದೆ ರೈತ ಯೋಗರಾಜ್ ಕಂಗಾಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾನೆ.

RELATED ARTICLES
- Advertisment -
Google search engine

Most Popular