Wednesday, June 11, 2025
Google search engine

Homeರಾಜ್ಯಸುದ್ದಿಜಾಲಬೆಳೆಸಾಲ ವಿಳಂಬದಿಂದ ರೈತರಿಗೆ ತೊಂದರೆ: ಸಹಕಾರ ಸಚಿವರ ಮಧ್ಯ ಪ್ರವೇಶಕ್ಕೆ ಆಗ್ರಹ

ಬೆಳೆಸಾಲ ವಿಳಂಬದಿಂದ ರೈತರಿಗೆ ತೊಂದರೆ: ಸಹಕಾರ ಸಚಿವರ ಮಧ್ಯ ಪ್ರವೇಶಕ್ಕೆ ಆಗ್ರಹ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೊಸದಾಗಿ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಜಿಲ್ಲಾ ಸಹಕಾರ ಬ್ಯಾಂಕಿ ನಿಂದ ಕಳೆದ ಮೂರು ವರ್ಷಗಳಿಂದ ಸಾಲ ವಿತರಣೆ ಮಾಡದೇ ರೈತರು ತೊಂದರೆ ಅನುಭವಿಸುತ್ತಿದ್ದು ಸಹಕಾರ ಸಚಿವರು ಮಧ್ಯ ಪ್ರವೇಶ ಮಾಡಿ ಸಾಲ ವಿತರಣೆಗೆ ಮುಂದಾಗ ಬೇಕೆಂದು ಹೊಸೂರು ಕೃಷಿ ಪತ್ತಿನ ಸಹಕಾರಸಂಘದ ಸಂಘದ ಅಧ್ಯಕ್ಷ ಎಚ್.ಅರ್.ಕೃಷ್ಣಮೂರ್ತಿ ಹೇಳಿದರು.

ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ರೈತವಾಗಿ ರಸಗೊಬ್ಬರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತಾಡಿದರು.
ನಮ್ಮ ಸಂಘವು ಷೇರುದಾರ ರೈತರಿಗೆ 2025-26ನೇ ಸಾಲಿನಲ್ಲಿ 15 ಕೋಟಿ ವಿವಿಧ ಬೆಳೆ ಸಾಲವನ್ನು ವಿತರಿಸಿದ್ದು ಸಾಲ ಪಡೆದ ರೈತರು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ದಿಗೆ ಸಹಕರಿಸಿ ಎಂದು
ಇನ್ನು ರೈತರಿಗೆ ಈ ಸಾಲದ ಜತಗೆ ಮಧ್ಯಮಾವಧಿ ಸಾಲ ಅಡಿಯಲ್ಲಿ ಟ್ಯಾಕ್ಟರ್,ಐಪಿ ಸೆಟ್, ಬೋರವೇಲ್, ಹೈನುಗಾರಿಕೆ ಮತ್ತು ವಾಹನ ಸಾಲವಾಗಿ 5 ಕೋಟಿ ವಿತರಿಸಿ ರೈತರಿಗೆ ಅನುಕೂಲ ಕಲ್ಪಿಸಿಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ 12 ವರ್ಷಗಳಿಂದ ಕಾರಣಾಂತರಗಳಿಂದ ಸ್ಥಗಿತ ಗೊಂಡಿದ್ದ ರೈತರಿಗೆ ವಿವಿಧ ಬಗೆಯ ರಸಗೊಬ್ಬರ ವಿತರಣೆಯನ್ನು ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದ್ದು ರೈತರು ನಗದು ಮೂಲಕ ವ್ಯಾಪಾರ ಮಾಡಿ ಸಂಘದ ಏಳಿಗೆಗೆ ಸಹಕರಿಸ ಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೈತರ ಪರವಾಗಿ ಮಾತನಾಡಿದ ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎ.ಕುಚೇಲ್, ಜಿಲ್ಲಾ ಅಪ್ ಕಾಮ್ಸ್ ಮಾಜಿ ಅಧ್ಯಕ್ಷ ಎಚ್.ಟಿ.ಸುದರ್ಶನ್, ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್ ಮಾತಾಡಿ ರೈತರು ರಸಗೊಬ್ಬರವನ್ನು ದುಬಾರಿ ದರ ನೀಡಿ ತೆಗೆದುಕೊಂಡು ನಷ್ಟ ಅನುಭವಿಸಿದಂತೆ ಸಂಘದ ಅಧ್ಯಕ್ಷ ಎಚ್.ಅರ್.ಕೃಷ್ಣಮೂರ್ತಿ ನೇತೃತ್ವದ ಆಡಳಿತ ಮಂಡಳಿ ನೇರವಾಗಿ ಸಂಘದಿಂದ ರಸಗೊಬ್ಬರವನ್ನು ಎಂ.ಅರ್.ಪಿ.ದರದಲ್ಲಿ ವಿತರಣೆಗೆ ಮುಂದಾಗಿ ರೈತರ ಹಿತ ಕಾಯುವ ತಿರ್ಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್‌.ರಾಜೇಗೌಡ, ಎಸ್.ಎಸ್.ಶಿವಸ್ವಾಮಿ
ಸಂಘದ ನಿರ್ದೇಶಕರಾದ ಎಸ್.ಬಿ. ಹುಚ್ಚೇಗೌಡ, ವಿವೇಕನಂದಾ, ಎಚ್.ಎನ್.ರಮೇಶ್, ಕಲ್ಯಾಣಮ್ಮಜಯಮ್ಮ , ಎಚ್.ಬಿ. ನವೀನ್ ಕುಮಾರ್ , ಪಾರ್ಥಯ್ಯ, ಸಂಘದ ಮಾಜಿ ಅಧ್ಯಕ್ಷ ಪುಟ್ಟರಾಜು, ಹಳಿಯೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಭಾಸ್ಕರ್, ಬಡ್ಡೆ ಮಂಜಣ್ಣ ಕಾಂಚನಾಅಜಯ್, ಕೃಷಿಕ ಸಮಾಜದ ನಿರ್ದೇಶಕ ಡಿ.ಸಿ.ರಾಮೇಗೌಡ,ಮಾಜಿ ನಿರ್ದೇಶಕ ಎಚ್.ಕೆ.ಕೀರ್ತಿ, ಮುಖಂಡರಾದ ಕೆಂಪಣ್ಣಸ್ವಾಮಣ್ಣ, ಬೆಣಗನಹಳ್ಳಿ ಪ್ರಶನ್ನ, ಎಚ್.ಅರ್.ರಾಘವೇಂದ್ರ, ರಾಜೇಶ್, ಚೇತು, ಸಂಘದ ಸಿಇಓ ಚಂದ್ರಕಲಾಪಾಪೇಗೌಡ, ಸಿಬ್ಬಂದಿಗಳಾದ ಲೋಕೇಶ್, ಅರುಣ, ಮಹದೇವ್, ರವಿ, ಸಂತೋಷ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular