ಮೈಸೂರು: ಕ್ರೀಡಾ ಭಾರತಿ ಜಿಲ್ಲಾ ಘಟಕದ ವತಿಯಿಂದ ಇದೇ ಫೆ. ೧೧ ರಂದು ಬೋಗಾದಿಯ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಮೃತ್ ಪುರೋಹಿತ್ ತಿಳಿಸಿದರು.
ಜಿಎಸ್ಎಸ್ ಶ್ರೀಹರಿ, ಮೊಗ್ಗಿನ ಮನೆ ಪ್ರಶಾಂತ್ ಇನ್ನಿತರರು ಪ್ರಾಯೋಜಕರಾಗಿದ್ದಾರೆ. ಈ ಕ್ರೀಡಾ ಕೂಟದಲ್ಲಿ ನಾಲ್ಕು ವಿಭಾಗಗಳಿದ್ದು, ಪ್ರವೇಶ ಶುಲ್ಕ ಎಂಟು ನೂರು ರೂ.,ಗಳಾಗಿವೆ. ಮೊದಲ ಸ್ಥಾನ ಗಳಿಸುವ ಎರಡು ತಂಡಗಳು, ನಾಲ್ಕು ವಿಭಾಗದಲ್ಲಿ ಒಟ್ಟು ೪೦ ಸಾವಿರ ರೂ., ಹಾಗೂ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.