ಮೈಸೂರು: ವರುಣಾಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ದರಾಗಿದ್ದು ಎಲ್ಲಾ ಕೆಲಸಗಳನ್ನು ಹಂತಹಂತವಾಗಿ ಮಾಡಿಕೊಡುವುದಾಗಿ ವರುಣಾಕ್ಷೇತ್ರದ ಮಾಜಿಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ವರುಣಾಕ್ಷೇತ್ರದ ಯಡಕೊಳ, ಅಂಚೆಹುಂಡಿ, ಶ್ರೀನಿವಾಸಪುರ, ದೇವೇಗೌಡನಹುಂಡಿ, ಕಡವೇಕಟ್ಟೆ ಹುಂಡಿ, ರಂಗನಾಥಪುರ, ಸಿದ್ದರಾಮಯ್ಯನಹುಂಡಿ, ಮುದ್ದೇಗೌಡನ ಹುಂಡಿ, ಕುಪ್ಪೇಗಾಲ, ಹೊಸಹಳ್ಳಿಗಳಲ್ಲಿ ಕಂದಾಯ ಅದಾಲತ್ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ರಂಗನಾಥಪುರದಲ್ಲಿ ಮಾತನಾಡಿದ ಅವರು ನಿಮ್ಮ ಗ್ರಾಮದ ಸಮುದಾಯ ಭವನ, ದೇವಸ್ಥಾನಕ್ಕೆ ಹಣವನ್ನು ಮಂಜೂರು ಮಾಡಿದ್ದೇನೆ.
ಯುವಕರಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸುತ್ತೇವೆ. ಬಿಜೆಪಿ ಸರ್ಕಾರವಿದ್ದ ಸಮಯದಲ್ಲಿ ಶಾಸಕರಿಗೆ ಹೆಚ್ಚಿನ ಅನುದಾನ ಬಂದಿಲ್ಲದ ಕಾರಣ ಸಮಸ್ಯೆಗಳು ಹೆಚ್ಚಾಗಿವೆ. ನಿಮ್ಮೆಲ್ಲರ ಆರ್ಶಿವಾದದಿಂದ ಸಿದ್ದರಾಮಯ್ಯರವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ ಈಗ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ಕುಮಾರ್, ಮುಖಂಡರಾದ ಪುಟ್ಟಣ್ಣ, ಕೆಂಪೀರಯ್ಯ, ಬಸವರಾಜು, ಮಂಜುಳಾ ಮಂಜುನಾಥ್, ಸಿದ್ದರಾಮು, ಶಿವಸ್ವಾಮಿ, ಎಂ.ಟಿ,ರವಿಕುಮಾರ್, ಮಾರ್ಬಳ್ಳಿ ಕುಮಾರ್, ಹಿನಕಲ್ ಉದಯ್, ಗ್ರಾಮದ ಮುಖಂಡರು, ಅಧಿಕಾರಿಗಳು ಹಾಜರಿದ್ದರು.