Sunday, April 20, 2025
Google search engine

Homeರಾಜ್ಯಸಕ್ಕರೆನಾಡು ಮಂಡ್ಯ ರೈತರಿಗೆ ಗುಡ್ ನ್ಯೂಸ್: ಜೂನ್ 30ರಂದು ಕಾರ್ಖಾನೆ ಬಾಯ್ಲರ್ ಗೆ ಅಗ್ನಿಸ್ಪರ್ಶ

ಸಕ್ಕರೆನಾಡು ಮಂಡ್ಯ ರೈತರಿಗೆ ಗುಡ್ ನ್ಯೂಸ್: ಜೂನ್ 30ರಂದು ಕಾರ್ಖಾನೆ ಬಾಯ್ಲರ್ ಗೆ ಅಗ್ನಿಸ್ಪರ್ಶ

ಮಂಡ್ಯ: ಸಕ್ಕರೆನಾಡು ಮಂಡ್ಯ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮತ್ತೆ ಕಬ್ಬು ಅರೆಯಲು ರೈತರ ಜೀವನಾಡಿ ಮೈಶುಗರ್ ಕಾರ್ಖಾನೆ ಸಜ್ಜಾಗಿದೆ.

ಜೂನ್ 30ರಂದು ಕಾರ್ಖಾನೆ ಬಾಯ್ಲರ್ ಗೆ ಅಗ್ನಿಸ್ಪರ್ಶ ಮಾಡಲಾಗುವುದು. ಜು.31 ರಿಂದ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಸಕಾಲಕ್ಕೆ ಕಾರ್ಖಾನೆ ಆರಂಭವಾಗುತ್ತಿದೆ. 2024-25ನೇ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಸಚಿವ ಎನ್.ಚಲುವರಾಯಸ್ವಾಮಿಯಿಂದ ಕಾರ್ಖಾನೆ ಬಾಯ್ಲರ್ ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಂಪ್ರದಾಯದಂತೆ ಗಣಪತಿ ಹೋಮ, ಪೂಜೆ ನಡೆಸಲಾಗುವುದು.

ಈಗಾಗಲೇ ಯಂತ್ರೋಪಕರಣಗಳ  ದುರಸ್ತಿ ಕಾರ್ಯ ಅಂತಿಮ ಹಂತದಲ್ಲಿದೆ. ಈ ಬಾರಿ 2.50 ಲಕ್ಷ ಟನ್ ಕಬ್ಬು ಅರೆಯುವ ಗುರಿಯಲ್ಲಿರುವ ಕಾರ್ಖಾನೆ ಹೊಂದಿದೆ.

ಮಂಡ್ಯದಲ್ಲಿ ಶಾಸಕ ಗಣಿಗ ಪಿ.ರವಿಕುಮಾರ್, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular