ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಿರೀಕ್ಷೆ ಮೀರಿ ಅಭಿಮಾನಿಗಳು ಬಂದಿದ್ದರು. ಹೆಚ್ಚಿನ ಸಿದ್ಧತೆ ಅಗತ್ಯವಿತ್ತು. ನಮ್ಮ ಭಾಗದಿಂದ ಲೋಪಗಳಾಗಿವೆ, ನಾವು ಜವಾಬ್ದಾರಿ ತಗೊಂಡಿದ್ದೇವೆ,” ಎಂದರು.
ಬಿಜೆಪಿ ಈ ವಿಷಯದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ, “ಅವರು ಈ ಕಲೆ ಚೆನ್ನಾಗಿ ಕಲಿತಿದ್ದಾರೆ. ಅವರ ಆರೋಪಗಳಿಗೆ ಸ್ಪಂದನೆ ಅಗತ್ಯವಿಲ್ಲ,” ಎಂದರು. ಸಿಎಂ ಹಾಗೂ ಡಿಸಿಎಂ ಈಗಾಗಲೇ ಈ ಕುರಿತು ಜವಾಬ್ದಾರಿ ಹೊತ್ತಿದ್ದಾರೆ. “ಪಬ್ಲಿಕ್ಗೋ ಸೂಚನೆಗಳು ಸ್ಪಷ್ಟವಾಗಿದ್ದರೆ ಒಳಿತು. ಮುಂದಿನ ಬಾರಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಕಟ್ಟುನಿಟ್ಟಾಗಿ ನಿಗಾ ವಹಿಸುತ್ತೇವೆ,” ಎಂದು ಖರ್ಗೆ ಹೇಳಿದರು.
ಬಿಜೆಪಿ ಮೊದಲು ಆರ್ಸಿಬಿಗೆ ವಿಜಯಪಥ ಸಂಭ್ರಮ ಆಚರಿಸದಿದ್ದರೆ ಅವಮಾನ ಎಂದಿದ್ದರು. ಆದರೆ ಟ್ವೀಟ್ನ್ನು ನಂತರ ಡಿಲೀಟ್ ಮಾಡಿದ್ದಾರೆ. “ಲೋಪಗಳಾಗಿವೆ, ಒಪ್ಪಿಕೊಂಡಿದ್ದೇವೆ. ದುರ್ಘಟನೆಯ ಜವಾಬ್ದಾರಿ ನಮ್ಮದಾಗಿದೆ,” ಎಂದು ಖರ್ಗೆ ಸ್ಪಷ್ಟಪಡಿಸಿದರು.