ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತೆಂಗು ಮತ್ತು ಇತರೆ ತೋಟಗಾರಿಕೆ ಬೆಳೆ ಬೆಳೆಯಲು ನರೇಗ ಯೋಜನೆಯಡಿ ಅನುದಾನ ನೀಡುತ್ತಿದ್ದು ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದು ಕೆ.ಆರ್.ನಗರ ಹಿರಿಯ ತೋಟಗಾರಿಕೆ ನಿರ್ದೇಶಕಿ ಭಾರತಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗೇಟ್ ನಲ್ಲಿ ತೋಟಗಾರಿ ಇಲಾಖೆ ಮತ್ತು ಅರ್ಕೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ವತಿಯಿಂದ ಆಯೋಜಿಸಿದ್ದ ತೆಂಗು ಬೆಳೆಯಲ್ಲಿ ರೋಗ ಮತ್ತು ಕೀಟ ಬಾಧೆ ಕುರಿತಾ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಆರ್.ನಗರ ಕ್ಷೇತ್ರದಲ್ಲಿ ತೆಂಗು ಬೆಳೆಯಲ್ಲಿ ಕಂಡುಬರುತ್ತಿರುವ ಕೆಂಪುಮೂತಿ, ಕಪ್ಪು ಮೂತಿ ಕೀಟಗಳು, ಮತ್ತು ಕಪ್ಪು ತಲೆ ಹೂಳಗಳ ನಿಯಂತ್ರಣಕ್ಕೆ ಇಲಾಖೆ ಶ್ರಮಿಸುತ್ತಿದ್ದು ಇವುಗಳಿಂದ ಹಾನಿ ಕಂಡು ಬಂದರೆ ಮೋಹಕ ಬಲೆಗಳನ್ನು ಇಲಾಖೆಯಿಂದ ಸಹಾಯಧನದಡಿ ನೀಡಲಾಗುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಎಲಚನಹಳ್ಳಿ ತೋಟಗಾರಿ ಕಾಲೇಜಿನ ತೋಟಗಾರಿಕೆ ವಿಜ್ಞಾನಿ ಡಾ.ಸಿದ್ದಪ್ಪ ಮಾತನಾಡಿ ತೆಂಗಿನ ಗಿಡಗಳಲ್ಲಿ ಕಂಡು ಬರುವ ವಿವಿಧ ರೋಗತಳಿಗಳು, ಕೀಟಗಳ ಬಗ್ಗೆ ತೋಟಗಾರಿಕೆ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನ ಔಷದ ಉಪಚಾರ ಮಾಡಿ ಅವುಗಳನ್ನು ನಿಯಂತ್ರಣ ಮಾಡಿ ಕಾಲಕ್ಕೆ ಗೊಬ್ಬರಗಳನ್ನು ನೀಡಿದರೆ ತೆಂಗಿನ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯ ಬಹುದು ಎಂದರು.

ತೆಂಗು ಬೆಳೆಯಲ್ಲಿ ಜೊತಗೆ ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿದರೆ ಯಾವ ಯಾವ ಗೊಬ್ಬರ ನೀಡಲು ಸಹಕಾರಿ ಅಗಲಿದ್ದು ಜತಗೆ ಹನಿ ನೀರಾವರಿ ಅಳವಡಿಸಿಕೊಳ್ಳಬೇಕು ಇದರಿಂದ ನೇರವಾಗಿ ಬೇರುಗಳಿಗೆ ನೀರಿನ ಸೌಕರ್ಯ ಒದಗಿಸಲು ಸಾದ್ಯವಾಗಲಿದ್ದು ಈ ಬೆಳೆಯಲ್ಲಿ ನಿಂಬೆ, ಜಾಯಿಕಾಯಿ,ಕೊಕೊ, ನುಗ್ಗೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದು ಇನ್ನಷ್ಟು ಅದಾಯ ಗಳಿಸಲು ರೈತರು ಮುಂದಾಗ ಬೇಕು ಎಂದು ಸಲಹೆ ನೀಡಿದರು.
ಚಿಕ್ಕಹನಸೋಗೆ ಗ್ರಾಮದ ಅಭಿಲಾಷ್ ಚಂದ್ರೇಗೌಡ ಅವರ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಂಗಿನ ಮರಕ್ಕೆ ಕೀಟಗಳ ನಿಯಂತ್ರಣಕ್ಕೆ ಬೇರಿಗೆ ಔಷದಿ ಕಟ್ಟುವ ಮೂಲಕ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಸಿ.ಕೆ.ರವೀಂದ್ರ, ತಾ.ಪಂ.ಮಾಜಿ ಸದಸ್ಯ ಬಂಡಹಳ್ಳಿ ಶಿವಣ್ಣ, ರೈತರಾದ ಶ್ರೀಧರ್, ನರಸಿಂಹೇಗೌಡ, ತಿಮ್ಮಗೌಡ, ಕಾಂತರಾಜು, ಸಿ.ಕೆ. ಗಿರೀಶ್, ತಂದ್ರೆ ಸುರೇಶ್, ಮೋಹನ್ ಜವರೇಗೌಡ, ಲಕ್ಷ್ಮೇಗೌಡ, ರಾಮೇಗೌಡ, ಚಂದ್ರೇಗೌಡ, ಸಹಾಯಕ ತೋಟಗಾರಿಕೆ ನಿರ್ದೇಶಕ ಸಂತೋಷ್, ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ನವೀನ್, ಜಿ.ಜೆ.ಶಂಕರ್, ಎಚ್.ಎಸ್.ರಾಘವೇಂದ್ರ, ಜಿ.ಹರೀಶ್, ಅರ್.ರಾಜೇಶ್, ಸಿಬ್ಬಂದಿ ಪಿ.ಚರಣ್ ಹರೀಶ್, ಅಪ್ಸರಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.