Friday, June 27, 2025
Google search engine

Homeರಾಜ್ಯಇನ್ನೊಂದು ವಾರದಲ್ಲಿ ಕೆಂಪೇಗೌಡರ ಸ್ಮಾರಕ ಭವನಕ್ಕೆ ಭೂಮಿ ಪೂಜೆ : ಸಚಿವ ಕೆ. ಎಚ್. ಮುನಿಯಪ್ಪ...

ಇನ್ನೊಂದು ವಾರದಲ್ಲಿ ಕೆಂಪೇಗೌಡರ ಸ್ಮಾರಕ ಭವನಕ್ಕೆ ಭೂಮಿ ಪೂಜೆ : ಸಚಿವ ಕೆ. ಎಚ್. ಮುನಿಯಪ್ಪ ಘೋಷಣೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಉತ್ಸವ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಳಿ ಇರುವ ಅವತಿ ಗ್ರಾಮದಲ್ಲಿ ಜ್ಯೋತಿ ಹೊತ್ತ ರಥಕ್ಕೆ ಸಚಿವ ಕೆ. ಎಚ್. ಮುನಿಯಪ್ಪ ಅವರು ಚಾಲನೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅವತಿ ಗ್ರಾಮದಲ್ಲಿರುವ ಚೆನ್ನಕೇಶವ ಸ್ವಾಮಿ ದೇಗುಲದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಯ ಅಂಗವಾಗಿ ಜ್ಯೋತಿ ಹೊತ್ತ ರಥಯಾತ್ರೆಗೆ ಚಾಲನೆ ನೀಡಿದ ನಂತರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಜನತೆ ಎದುರಿನ ಭಾಷಣದಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಿದರು.

ಅವತಿ ಗ್ರಾಮವು ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳವೆಂದು ಪರಿಗಣಿಸಲ್ಪಡುತ್ತಿದ್ದು, ಅಲ್ಲಿಯೇ 9 ಎಕರೆ ಪ್ರದೇಶದಲ್ಲಿ ಭವ್ಯವಾದ ಸ್ಮಾರಕ ಭವನವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಭವನದಲ್ಲಿ ಕೆಂಪೇಗೌಡರ ಇತಿಹಾಸ, ಬೆಂಗಳೂರು ನಗರ ನಿರ್ಮಾಣದ ಶಿಲ್ಪಿಯಾಗಿ ಅವರ ಪಾತ್ರ, ಬಾಳಿನ ಪ್ರಮುಖ ಘಟನೆಗಳನ್ನು ವಿವರಿಸುವಂತಹ ಘನ ಸ್ಮಾರಕದ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular